Sunday, August 14, 2011

ಮುಂದೆ ಆ ದಿನ ಕೂಡ ಬರುತ್ತದೆ.....

ಗೆಳೆಯರೇ ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ಧಿಕ ಶುಭಾಶಯಗಳು

ಗೆಳೆಯ ವಿನಯ ಭಟ್ ರವರು ಚಂದದ ಲೇಖನವನ್ನ ಕಳುಹಿಸಿಕೊಟ್ಟಿದ್ದಾರೆ. ವಿನಯ ಭಟ್ ಅವರು ಎಲೆಮರೆಯ ಪ್ರತಿಭೆ. ಬೆಂಗಳೂರಿನ ಪ್ರತಿಷ್ಠಿತ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ ಇದ್ದು. ಅನೇಕ ಕವಿತೆಗಳನ್ನ, ಕಥೆಗಳನ್ನ, ಲೇಖನವನ್ನ ಬರೆದಿದ್ದಾರೆ. ಸಾಹಿತ್ಯ, ಕಲೆ, ಸಂಗೀತದಲ್ಲಿ, ಸಮಾನ ಅಭಿರುಚಿ ಉಳ್ಳವರಾಗಿದ್ದಾರೆ. ಇದು ಅವರ ಕಿರು ಪರಿಚಯ. ಮುಂದೆ ಅವರು ಬರೆದಂತಹ ಅನೇಕ ಕವನ, ಲೇಖನ, ಕಥೆ ಮುಂತಾದ ಸಾಹಿತ್ಯ ಹೂರಣವನ್ನ ನಿಮ್ಮಮುಂದೆ ಕರಾವಳಿ ರೈಲಿನಲ್ಲಿ ಪ್ರಕಟಿಸಲಿದ್ದೇನೆ.


ಧನ್ಯವಾದಗಳು

ನಿಮ್ಮವ ಮಹಾಬಲಗಿರಿ ಭಟ್




ªÀÄÄAzÉ D ¢£À PÀÆqÀ §gÀÄvÉÛ......
PÀ©ü ªÉÇà ¢£ï D0iÉÄÃUÁ, d¨ï DgÀhiÁzï ºÀªÀiï ºÉÆÃAUÉ/ 0iÉÄà C¥À¤Ã » d«ÄÃ£ï ºÉÆÃUÁ C¥À£Á D¸ÀªÀiÁ£ï ºÉÆÃUÁ/ ±À»ÃzÉÆ PÉ avÁªÉÇà ¥Àgï ºÀgï §gÀ¸ï ®UÉÃAUÉ ªÉÄïÉ/ ªÀvÀ£ï ¥Àgï ªÀÄgÀ£ÉªÁ¯ÉÆAPÁ 0iÀĻà £ÁªÀiï ¤±Á£ï ºÉÆÃUÁ...
ªÀÄÄAzÉ D ¢£À PÀÆqÀ §gÀÄvÉÛ. £ÀªÀÄäzÉà DzÀ ¨sÀÆ«Ä, DPÁ±À EgÀÄvÉÛ, ºÀÄvÁvÀägÀ ¸ÀªÀiÁ¢ü0iÀÄ ªÉÄÃ¯É ¥Àæw ªÀgÀĵÀ eÁvÉæ £ÀqÉ0iÀÄÄvÉÛ. zÉñÀPÁÌV ¥ÁætvÁåUÀ ªÀiÁrzÀªÀjUÉ EzÉà ¸À£Áä£ÀªÁUÀ°zÉ. »ÃUÉAzÀÄ ¸ÁévÀAvÀæ÷åzÀ PÀ£À¸ÀÄ PÀnÖPÉÆAqÀÄ PÉÆ£É ¢£ÀUÀ¼À°è eÉʰ£À°è0iÉÄà PÀ«vÉ gÀa¹, £ÉÃtÄUÀA§ªÉÃjzÀÄÝ ¨sÀUÀvï¹AUï. vÁªÀÅ £ÉÃtÄUÀA§ªÉÃj MAzÀÄ ªÁgÀzÉÆ¼ÀUÉ zÉÆqÀØ PÁæAw0iÀiÁV zÉñÀPÉÌ ¸ÁévÀAvÀæ÷å zÉÆgÉ0iÀÄÄvÀÛzÉ. DUÀ £ÀªÀÄä zÉñÀªÁ¹UÀ¼ÀÄ £ÁªÀÅ ªÀiÁrzÀ vÁåUÀ §°zÁ£ÀUÀ¼À£ÀÄß £É£ÉzÀÄ ¥ÀæwªÀgÀĵÀ eÁvÉæ ¸ÀªÀiÁgÀA¨sÀUÀ¼À£ÀÄß ªÀiÁqÀÄvÁÛgÉ. £ÀªÀÄä vÁåUÀ §°zÁ£ÀPÉÌ CzÉà ¸À£Áä£À J£ÀÄߪÀÅzÀÄ ºÀÄvÁvÀä ¨sÀUÀvï ¹AUï CªÀgÀ C¤¹PÉ0iÀiÁVvÀÄÛ. DzÀgÉ FUÀ DUÀÄwÛgÀĪÀÅzÉãÀÄ?
¸ÀévÀAvÀæ ¨sÁgÀvÀzÀ £É®ªÁzÀ PÁ²äÃgÀzÀ°è wæªÀtð zsÀédªÀ£ÀÄß ºÁj¸À®Ä ºÉzÀgÀĪÀ, GUÀægÀÄ ClÖºÁ¸À £ÀqɸÀÄwÛzÀÝgÀÆ CzÀ£ÀÄß vÀqÉUÀlÖ¯ÁUÀzÀ, ¸ÉgɹPÀÌ GUÀægÀ£ÀÄß UÀ°èUÉÃj¸À¯ÁUÀzÀ ¨sÀæµÀÖ ªÀåªÀ¸ÉÜ, £ÀÆgÁgÀÄ ºÀUÀgÀtUÀ¼ÀÄ EªÉà PÀtÂÚUÉ gÁZÀÄwÛgÀĪÀÅzÀÄ. ªÀåªÀ¸ÉÜ UÀ¨ÉâzÀÄÝ ºÉÆÃVzÀÝgÀÆ CzÀ£ÀÄß £ÉÆÃr0iÀÄÆ vÀªÀÄäzÀ®èªÀAvÉ ªÀwð¸ÀÄwÛgÀĪÀ ¥ÀæeÁvÀAvÀæ ªÀåªÀ¸ÉÜ. EzÉAvÀºÀ «¥À0iÀiÁð¸À ! UÁA¢üÃf, ¸ÀĨsÁ¸ï, gÁdUÀÄgÀÄ, ¸ÀÄRzÉêï, ¯Á¯ï, ¨Á¯ï, ¥Á¯ï ªÀÄÄAvÁzÀ zÉñÀ¨sÀPÀÛgÀ gÀPÀÛ ºÀj0iÀÄÄwÛgÀĪÀ £ÀªÀÄä zÉúÀzÀ°è eÁqÀåvÉ0iÀÄ «µÀ ¨ÉgÉwzÁÝzÀgÀÆ ºÉÃUÉ? ¸ÀvÀå ºÀj±ÀÑAzÀæ, gÁªÀÄ, PÀȵÀÚ, zsÀªÀÄðgÁAiÀÄ EAvÀºÀ ªÀĺÁ£ï ªÀåQÛUÀ¼À vÁwéPÀ ªÀiË®åUÀ¼À ªÉÄÃ¯É ¤AvÀ £ÀªÀÄä ¸ÀA¸ÁÌgÀ PÀ®Ä¶vÀUÉÆAqÀzÁÝzÀgÀÆ ºÉÃUÉ?..... EAvÀºÀ ¥Àæ±ÉßUÀ¼ÀÄ ¸ÀºÀdªÁV ªÀÄÆqÀÄvÀÛzÉ.
EzÀPÉÌ PÁgÀtªÀ£ÀÄß ºÀÄqÀÄPÀÄvÀÛ ¸ÁVzÀgÉ £ÀªÀÄUÉ PÁt¸ÀĪÀ ¸ÁªÀiÁ£Àå ¸ÀAUÀw0iÉÄAzÀgÉ  £ÀªÀÄä gÁdQÃ0iÀÄ ªÀÄÄRAqÀgÀ C¢üPÁgÀ ¯Á®¸É. EzÀPÁÌV Erà zÉñÀªÀ£Éßà czÀæUÉÆ½¸ÀºÉÆgÀnzÁÝgÉ. eÁw, ªÀÄvÀ, ¨sÁµÉ0iÀÄ DzsÁgÀzÀ ªÉÄÃ¯É ªÉÇÃmï¨ÁåAPï gÁdQÃ0iÀÄ ªÀiÁr vÀªÀÄä zÀÄgÁ¸É0iÀÄ£ÀÄß FqÉÃj¹PÉÆ¼ÀÄîwÛzÁÝgÉ. zÉñÀ¥ÉæÃªÀĪÀ£ÀÄß gÀPÀÛzÀ PÀtPÀtzÀ®Æè ¸ÀÄàj¸ÀĪÀ gÁµÀÖç¨sÀPÀÛgÀ£ÀÄß zÉñÀzÉÆæÃ»UÀ¼ÁV ©A©¸ÀÄwÛzÁÝgÉ. zÉñÀzÀ ªÀÄÄUÀÝ d£ÀgÀ£ÀÄß ºÀvÉåUÉÊzÀ £ÀgÀ¦¥Á¸ÀÄ GUÀægÀ£ÀÄß ¸ÉgɪÀÄ£É0iÀÄ°è ¥ÀAZÀvÁgÁ ¸Ë®¨sÀå¢AzÀ £ÉÆÃrPÉÆ¼ÀÄîwÛzÁÝgÉ. EªÉ®èªÀÇ ªÉÇÃnUÁV..
F zÉñÀzÀ £É®, d®zÀ §UÉÎ QAavÀÆÛ C©üªÀiÁ£À«®èzÀ ªÀåQÛUÀ¼ÀÄ zÉñÀzÀ ¤0iÀÄAvÀæPÀgÁVzÁÝgÉ. ªÀÄ£É0iÀÄ ªÀÄÄA¢£À VqÀPÉÌ ¤ÃgÀÄ ºÁPÀzÀ ªÀåQÛ ¨ÉÃgÉ0iÀĪÀgÀ ºÉÆ®zÀ°è ªÀÄtÚ£ÀÄß ºÉÆgÀÄwÛzÁÝgÉ. ¸Éß»vÀgÉà F zÉñÀzÀ §UÉÎ £ÉÊd PÁ¼Àf0iÀÄ£ÀÄß  £ÁªÀÅ ¨É¼É¹PÉÆAqÀÄ, EAvÀºÀ ¸ÉÆÃUÀ¯ÁrvÀ£ÀzÀ gÁdPÁgÀtÂUÀ¼À£ÀÄß £ÀªÀÄä ªÀåªÀ¸ÉܬÄAzÀ  zÀÆgÀUÉÆ½¹ ¸ÀéZÀÒ ¸ÀÄAzÀgÀ ¨sÁgÀvÀªÀ£ÀÄß ¤«Äð¸À¨ÉÃPÁVzÉ. EzÀPÉÌ ºÉÆÃgÁqÀÄwÛgÀĪÀ CuÁÚ ºÀeÁgÉAiÀĪÀgÀAvÀºÀ zÉñÀ¨sÀPÀÛjUÉ £ÀªÀÄä ¨ÉA§®ªÀ£ÀÄß ¤Ãr ¨sÀæµÀÖgÀ£ÀÄß zÀªÀÄ£À ªÀiÁqÀ¨ÉÃPÁVzÉ.
ºËzÀÄ.. EzÀgÀ eÉÆvÉUÉ ¨sÁgÀvÀzÀ ¨sÀ«µÀåªÁzÀ £Á£ÉƧ⠧zÀ¯ÁUÀÄvÉÛãÉ. ¸ÁzsÀåªÁzÀgÉ, M§â£À£ÀÄß §zÀ¯Á¬Ä¸ÀÄvÉÛãÉA§ ¥ÀæweÉÕ0iÀÄ£ÀÄß £ÁªÉ®ègÀÆ vÉUÉzÀÄPÉÆAqÀgÉ..... ¥Àæw0iÉÆ§â ¨sÁgÀwÃAiÀÄ vÁ0iÀÄA¢gÀÄ vÀ£Àß ªÀÄUÀĪÀ£ÀÄß ²ªÁf, UÀÄgÀÄUÉÆÃ«AzÀ¹AUï, gÁuÁ¥ÀævÁ¥ï, «Ãgï ¸ÁªÀPÀðgï, «PÀæA ¨sÁvÁæ, ¸ÀA¢Ã¥ï G¤ßPÀñµÀÚ£ï, ºÉêÀÄAvï PÀPÀðgÉ CªÀgÀAxÀ «ÃgÀ PÀ°UÀ¼ÁV ¨É¼É¹zÀgÉ.....  ¸ÀªÀð¸ÀévÀAvÀæ; eÁÕ£À, ¸ÀA¸ÀÌöÈw, DyðPÀvÉ, ªÉÊeÁÕ¤PÀvÉ, »ÃUÉ J®è PÉëÃvÀæUÀ¼À°è ¥ÀæPÁ²¸ÀĪÀAvÀ ¨sÁgÀvÀzÀ GzÀ0iÀĪÁUÀ®Ä ¸ÁzsÀå...
ªÉÇà ¢£ï D0iÉÄUÁ.....   G¸ï ¢£ï ªÉÄÃgÁ ¨sÁgÀvï ªÀĺÁ£ï ºÉÆÃUÁ .....
JA§ ¸ÀzÁ±À0iÀÄzÉÆA¢UÉ.....
ವಿನಯ ಭಟ್



Tuesday, July 26, 2011

ನಡೆಯುತಿದೆ ಕನಕಾಭಿಷೇಕ




ಪರಾಂಜಪೆ  ಸರ್ ರವರು ಪ್ರೀತಿಯಿಂದ ಕೆಳಗಿನ  ಕವನವನ್ನ ಬರೆದು ಕೊಟ್ಟಿದ್ದಾರೆ 

-----------   ಹೇಮಜ್ಯೋತಿ ಚೆಲ್ಲಿದೆ  ---------------

ನೊರೆಯುಕ್ಕಿ ಮೈಮರೆತು ಮೊರೆಯುತಿಹಳು ವಾರಿಧಿ
ನಿಶಾಲೋಕದತ್ತ ಹೊರಟ ಮನೋರಥದ ಸಾರಥಿ
ಬಾನುಭುವಿಯ ಸಾ೦ಗತ್ಯಕೆ ಕಳಸವಿಟ್ಟ ಕು೦ದಣ
ರವಿಯ ಹೊನ್ನಬಣ್ಣದಲ್ಲಿ ಲಕಳಕಿಸುತಿದೆ ಬಾ೦ದಳ

ಹಿತವಾಗಿಹ ಸಂಜೆ ಬಿಸಿಲು ನೀಡಿದೆ ಮುದ ಮನಕೆ
ಮಿ೦ದು ನೆ೦ದು ಜಳಕವಾಡಿ ಹಗುರವಾಗೋ ಬಯಕೆ
ನೇಸರನು ನೇಪಥ್ಯಕ್ಕೆ ಸರಿವ ಗಳಿಗೆ ಬ೦ದಿದೆ
ದಿವಸ್ಪತಿಯ ದಿವ್ಯಪಥದಲಿ ಹೇಮಜ್ಯೋತಿ ಚೆಲ್ಲಿದೆ

ಪರಾಂಜಪೆ ಕೆ.ಏನ್
(ಚಿತ್ರದ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ನೋಡಬಹುದು)  

Friday, July 22, 2011

ಬೀಚಿಯವರ ಬೊಂಬಾಯಿ ಮತ್ತು ನಿರೋಧ್ ಬಲೂನು


ತಲೆಬರಹವನ್ನ ಓದುವ ಹೊತ್ತಿಗೆ ವಯಸ್ಕರು ಮಾತ್ರ ಓದಬಹುದಾದಂತ ಲೇಖನ ಅಂತ ನೀವು ನಿರ್ಧರಿಸಿರುತ್ತೀರಿ. ಬೀಚಿಯವರ ಆತ್ಮ ಚರಿತ್ರೆ ನನ್ನ ಭಯಾಗ್ರಪಿ ಅನ್ನುವ ಪುಸ್ತಕದಲ್ಲಿ ಬೊಂಬಾಯಿ ಅನ್ನುವ ಹತ್ತೊಂಬತ್ತನೆ ಅಧ್ಯಾಯವಿದೆ. ಆ ಅಧ್ಯಾಯದ ಪೂರ್ಣ ಪಾಠವನ್ನ ನಾನು ನಿಮಗಿಂದು ಹೇಳಬೇಕಾಗಿದೆ. ಮತ್ತು ನನ್ನದೇ ಆದ ಭಯಂಕರ ಭಯಾಗ್ರಪಿ ಯಿಂದ ಹೆಕ್ಕಿದ ಇನ್ನೋದು ಘಟನೆಯನ್ನ ಕೂಡ ಇಲ್ಲಿ ಹೇಳಿಬಿಡುತ್ತೇನೆ. ಮೊನ್ನೆ ಪರಾಂಜಪೆಯವರ ಮನೆಗೆ ಪುಸ್ತಕಾರ್ಥಿಯಾಗಿ ಹೋಗಿದ್ದೆ. ಕನ್ಯಾರ್ಥಿಯಾಗಿ ಬಂದ ಅಳಿಯನಿಗೆ ತುಂಬುಜವ್ವನೆಯಾದ ಹುಡುಗಿಯನ್ನ ಕೊಟ್ಟು ಅದರೊಟ್ಟಿಗೆ ಧನ ಕನಕ ವಸ್ತು ವಾಹನ ಸೈಟ್ ಸೂಟು ಬೂಟುಗಳನ್ನ ಕೊಡುವದಿಲ್ಲವೇ ಹಾಗೆ ಪುಸ್ತಕಾರ್ಥಿಯಾದ ನನಗೆ  ಪರಾಂಜಪೆಯವರು ಕೊಟ್ಟ ಕೆಲವು ಓದಲೇ ಬೇಕಾದ ಪುಸ್ತಕಗಳಲ್ಲಿ  ಹಾಸ್ಯ ಬ್ರಹ್ಮನ ಭಯಾಗ್ರಪಿಯೂ ಒಂದು. ಹಾಸ್ಯ ಬ್ರಹ್ಮನ ಜೀವನ ಚರಿತ್ರೆಯಲ್ಲಿ ಹಾಸ್ಯಕ್ಕೆ ಕಡಿಮೆಯೇ..? ಅಲ್ಲದೇ ನೋವು, ನಲಿವು, ನಗು, ಎಲ್ಲವೂ ಇದೆ. ಪುಸ್ತಕವು ಓದಿಸಿಕೊಂಡು ಹೋಯಿತು. ಇಷ್ಟವಾಯಿತು ಕೂಡ.

ನನ್ನ ದೃಷ್ಟಿಯಲ್ಲಿ ಮಕ್ಕಳನ್ನ ಹೊಡೆಯುವದು ಮಹಾಪರಾಧ ಮತ್ತು ಅಷ್ಟೇ ಅಕ್ಷಮ್ಯ ಅಪರಾಧ ಹೀಗೆ ಸಾಗುತ್ತದೆ ಬೀಚಿಯವರ ಸಾಲುಗಳು. ಮಕ್ಕಳನ್ನ ಹೊಡೆಯುವದನ್ನ ಅವರು ಎಂದೂ ಸಹಿಸಲಾರರು. ಕೆಲವೊಮ್ಮೆ ದಾರಿಯ ಮಧ್ಯದಲ್ಲಿ ಪೋಷಕರು ಮಕ್ಕಳನ್ನ ಹೊಡೆದರೆ ಮಧ್ಯೆ ಬಾಯಿಹಾಕಿ ಪೋಷಕರಿಂದ ಬೈಗುಳವನ್ನ ತಿನ್ನುವದು ಅವರಿಗೆ ಹೊಸದೇನಲ್ಲ. ಹಾಗೆ ಕಾದಾಡಿ ಅಧಿಕ ಪ್ರಸಂಗಿ ಅನ್ನಿಸಿಕೊಂಡ ಸಂದರ್ಭಗಳೂ ಬಹಳ.
ಇದೆಲ್ಲವೂ ತನ್ನ ಬಾಲ್ಯದ  ವೈಪರೀತ್ಯದ ಪರಿಣಾಮವೆನ್ನುತ್ತಾರೆ ಬೀಚಿಯವರು. ಹುಟ್ಟಿದ ವರ್ಷಕ್ಕೆ ತಂದೆಯವರನ್ನ ಕಳೆದು ಕೊಂಡರು. ಅರೇಳು ವರ್ಷಕ್ಕೆ ತಾಯಿಯನ್ನೂ ಕಳೆದುಕೊಳ್ಳಬೇಕಾಯಿತು. ಅವರ ಅತ್ತೆಯ ಮನೆಯಲ್ಲಿ ಬೆಳೆಯುವ ಪರಿಸ್ಥಿತಿ ಬಂದಿತು. ಅತ್ತೆಯ ಗಂಡ ಮಾವನಾದರೋ ಶೀಘ್ರ ಕೋಪಿಗಳು. ಯಾಕೆ ತಪ್ಪುಮಾಡಿದೆ ಅನ್ನುವುದನ್ನ ಕೇಳಿ ಆಮೇಲೆ ಹೊಡೆಯಬೇಕೆನ್ನುವ ಪರಿಜ್ನಾನವೂ ಕೂಡ ಇಲ್ಲದವರು. ಹೆಡ್ ಜೈಲರ್ ಆಗಲು ಯೋಗ್ಯರಾದವರು ತನ್ನ ಪೋಷಕರಾದುದು ದುರ್ದೈವ ಅನ್ನುತ್ತಾರೆ ಬೀಚಿಯವರು. ಅದೆಲ್ಲದರ ಪರಿಣಾಮದಿಂದಾಗಿ ಮಕ್ಕಳನ್ನ ಹೊಡೆಯುವದನ್ನ ಅವರು ಸಹಿಸುತ್ತಿರಲಿಲ್ಲ.

ಬೀಚಿಯವರು ಮದ್ರಾಸಿನಲ್ಲಿರುವಾಗ ಇಂತಹದೇ ಅಪರಾದವೊಮ್ಮೆ ಅವರ ಹೆಂಡತಿಯಿಂದ ಆಯಿತು. ಅನಾಮತ್ತಾಗಿ ನಾಲ್ಕುವರ್ಷದ ಮಗನಿಗೆ ಅವನ ತಾಯಿ,ಅಂದರೆ ಬೀಚಿಯವರ ಹೆಂಡತಿ ಹೊಡೆದುಬಿಟ್ಟಿದ್ದಳು. ಅದರ ಹಿಂದಿನ ಘಟನೆ ತುಂಬ ಮಜವಾಗಿದೆ .

ಕೆಲವು ಅಶ್ಲೀಲ ಶಬ್ಧಗಳನ್ನ ಮಕ್ಕಳು ಮನೆಯಲ್ಲಿ  ಆಡಬಾರದೆಂದು ನಿಯಮ. ಮಹಾ ಅಪರಾಧ ಕೂಡ ಹೌದು. ಅವರ ಮಗನಿಗೆ ಮೂತ್ರ ಮಾಡುವ ಅಂಗಕ್ಕೆ (ಶಿ.....) ಬೊಂಬಾಯಿ ಅಂತ ಕಂಠಪಾಟ ಮಾಡಿಸಲಾಗಿತ್ತು. ಅವನು ಉರಿಮೂತ್ರವಾದಾಗ ಬೊಂಬಾಯಿ ಉರಿಯುತ್ತದೆ ಅನ್ನುತ್ತಿದ್ದ.

ಒಮ್ಮೆ ಅವರ ರಡಿಯೋ  ನಾಟಕದಲ್ಲಿ ಅಭಿನಯಿಸುತ್ತಿದ್ದ ರಂಭಾ ಅನ್ನುವ ಕನ್ನಡದವರೊಬ್ಬರು  ಪರಿಚಯವಾದರು. ಹೆಣ್ಣುಮಗಳು ತನ್ನ ತಾಯಿಯೊಡನೆ ಆಗಾಗ ಅವರ ಮನೆಗೆ ಬರುತ್ತಿದ್ದರು. ಹೀಗೆ ಒಂದುದಿನ ರಂಭಾ  ಅವರ ತಾಯಿಯೊಡನೆ ಬೀಚಿಯವರ ನೆಗೆ ಬಂದಾಗ ಬೀಚಿಯವರು ಮನೆಯಲ್ಲಿರಲಿಲ್ಲ. ಆಮೇಲೆ ಮನೆಗೆ ಬಂದರು. ಬರುತ್ತಿದ್ದಂತೆ ಅಳುತ್ತಿರುವ ಮಗನನ್ನ ನೋಡಿದರು. ಅವನನ್ನ ಎಷ್ಟು ಸಂತೈಸಿದರೂ ಸುಮ್ಮನಾಗಲಿಲ್ಲ. ಬಹಳ ಹೊತ್ತು ರಮಿಸಿ ಕೇಳಿದಾಗ ಅಮ್ಮ ಹೊಡೆದಳು ಅನ್ನುವ ಉತ್ತರ ಬಂತು.

ಬಂದವರ ಎದುರಿಗೇ ಹೆಂಡತಿಯನ್ನ ಯಾಕೆ ಹೊಡೆದಿ ಅಂತ ಸಿಟ್ಟಿನಲ್ಲಿಯೇ ಕೇಳಿದರು.
ಅವನನ್ನೇ ಕೇಳ್ರಿ ಏನು ಮಾಡಿದನೆಂದು
ಅನ್ನುವ ಉತ್ತರ ಅವರ ಹೆಂಡತಿಯಿಂದ ಬಂತು.
ಬೀಚಿಯವರ ಕೋಪ ಕುದಿಯುತ್ತಲೇ ಇತ್ತು. ಮತ್ತೆ ಕೇಳಿದರು
ಏನುಮಾಡಿದ ನೀನೆ ಹೇಳು
ಅಂತ ನಿಂತಲ್ಲೇ ಗುಡುಗಿಕೊಂಡರು.
ಆಮೇಲೆ ಹೇಳ್ತೀನಿ
ಎಂದು  ಹೇಳಿ ಅವರ ಹೆಂಡತಿ ಅಥಿತಿಗಳ ಸತ್ಕಾರದಲ್ಲಿ ತೊಡಗಿಕೊಂಡಳು. ಅಥಿತಿಗಳು ಹೋದನಂತರ ವಿಚಾರಿಸಿಕೊಂಡರಾಯಿತು ಅಂತ ಕಾಯ್ದು ಕುಳಿತರು ಬೀಚಿಯವರು. ಅಥಿತಿಗಳು ಗೇಟನ್ನ ದಾಟಿದ್ದೇ ತಡ ಬೀಚಿಯವರ ವಿಚಾರಣೆ ಆರಂಭವಾಯಿತು.
ಇವನೇನು ಮಾಡಿದ ಯಾಕೆ ಹೊಡೆದೆ.....?
ಅದು ಇದು ಕಷ್ಟ ಸುಖ ಮಾತನಾಡುತ್ತ ರಂಭೆ ಬೀಚಿಯವರ ಹೆಂಡತಿಯಲ್ಲಿ ಹೇಳಿದಳಂತೆ.
ನಮ್ಮ ಪುಣ್ಯ ಇತ್ರಿ ಮದ್ರಾಸು ನೋಡಿದೀವಿ. ಇನ್ನು ಬೊಂಬಾಯಿ ಒಂದು ನೋಡಬೇಕು
ಇಲ್ಲಿ ಇದೆ ನೋಡು ಬೊಂಬಾಯಿ

ಅಂತ ಚೆಡ್ಡಿ ಎತ್ತಿ ತೋರಿಸಿಯೇ ಬಿಟ್ಟನಂತೆ ಬೀಚಿಯವರ ಮಗ J
ಪಾಪ ಮಕ್ಕಳಿಗೇನು ಗೊತ್ತಿರುತ್ತದೆ ಹೇಳಿ...? ಇಲ್ಲಿ ತಪ್ಪು ಒಪ್ಪು ಯಾರದ್ದು ಅನ್ನುವದನ್ನ ನೀವೇ ಲೆಕ್ಕ ಹಾಕಿಕೊಳ್ಳಿ.

ಅಥ ಬೀಚಿ ಭಯಾಗ್ರಪಿ ಮಧ್ಯೆ ಎಕೋನ ವಿಂಶತಿ ಅಧ್ಯಾಂಯಂ ಸಂಪೂರ್ಣಮ್!!ಬೀಚ್ಯಾರ್ಪಣಮಸ್ತು !!

ಅಥ ನನ್ನ ಭಯಂಕರ ಭಯಾಗ್ರಪಿ ಮದ್ಯೇ ಇಂತಹದೇ ಒಂದು ಪ್ರಸಂಗಮ್ ಆರಂಭಮ್   !!
ನನ್ನ ಪರಿಚಯಸ್ತರೊಬ್ಬರು. ದೋ.ಘ.ನಾ ಅಂತಿರಲಿ.ನಮ್ಮ ದೋ.ಘ.ನಾ ರವರು ಮಕ್ಕಳನ್ನ ದ್ವೇಷಿಸುವವರೋ ಅಥವಾ ಪ್ರೀತಿಸುವವರೋ ನಾನು ಅವರಬಗ್ಗೆ ಅಷ್ಟೊಂದು ಅಧ್ಯಯನ ಮಾಡಿದವನಲ್ಲ. ಹಾಗಂತ ಮನೆಯಲ್ಲಿದ್ದ ಮಕ್ಕಳಿಗೆ ಯಾವತ್ತೂ ಕಡ್ಡಿಪೆಪ್ಪರಮೆಂಟನ್ನ ತಂದು ಕೊಡಲು ಮರೆತವರಲ್ಲ. ಹೀಗೆ ಯಾವಗಲೂ ತಾವು ಪ್ಯಾಟೆಗೆ ಹೋದಾಗ ದಿನಸಿ ಸಾಮಾನಿನ ಚೀಲದಲ್ಲಿ ಯಾವಾಗಲೂ ತಲಾ ಎರಡೆರಡು ಕಡ್ಡಿ ಪೆಪ್ಪರಮಿಟಾಯಿ ತಂದೇ ತರುತ್ತಿದ್ದರು. ಅಪ್ಪ ಪೇಟೆಯಿಂದ ಬಂದಕೂಡಲೇ ದಿನಸಿ ಚೀಲವನ್ನ ಹುಡುಕಿ ಚಾಕಲೇಟನ್ನ ತೆಗೆದುಕೊಂಡು ಕುಶಿಯಿಂದ ಚಾಕಲೇಟಿನ ಸವಿಯನ್ನ ತಾಸುಗಟ್ಟಲೆ ನೀರಾಗದಂತೆ ನಾಲಿಗೆಯನ್ನ ನಿಧಾನವಾಗಿ ತಾಗಿಸಿ ತಾಗಿಸಿ ಅಂತೂ ಇಂತೂ ಚಾಕಲೇಟು ಮುಗಿದಮೇಲೂ ಕಡ್ಡಿಯ ಬುಡದಲ್ಲಿ ಅಂಟಿಕೊಂಡ ಸಿಹಿಯನ್ನ ನೆಕ್ಕಿಯಾದಮೇಲೆಯೇ ಬೀಸಾಕುತ್ತಿದ್ದರು. ಇಂತಿರ್ಪ ಸಂದರ್ಭದೊಳ್ ಒಂದಿನಾ.... ಎಂದಿನಂತೆಯೆ ದೋ.ಘ.ನಾ. ರವರು ಪ್ಯಾಟೆಯಿಂದ ಮನೆಗೆ ಬಂದವರೇ ತಮ್ಮ ಕೈಚೀಲವನ್ನ ಮನೆಯ ಹೊಳ್ಳಿಮೇಲೆ ಇಟ್ಟು (ಹೊರಜಗುಲಿ) ಯಾವುದೋ ಅರ್ಜೆಂಟ್ ಕೆಲಸದಮೇಲೆ ಹೊರಗೆ ನಡೆದರು. ಹಾಗೆ ಮಕ್ಕಳು ಎಂದಿನ ಅಭ್ಯಾಸದಂತೆ ಚೀಲವನ್ನ ತಡಕಾಡಿದರು. ಅವರಿಗೆ ಇಂದು ಡಬಲ್ ಧಮಾಕ ಕಾದಿತ್ತು. ಪೆಪ್ಪರಮೆಂಟ್ ಜೊತೆಗೆ ನಾಲ್ಕಾರು ಬಲೂನ್ ಗಳು ಇದ್ದವು( ವಯಸ್ಕರು ಉಪಯೋಗಿಸುವ ಬಲೂನು) ಮಕ್ಕಳಿಗೇನು ಗೊತ್ತು ಪಾಪ..?  ಅವರು ಇವತ್ತು ಚಾಕಲೇಟ್ ಜೊತೆಗೆ ಆಟ ಆಡಲಿಕ್ಕೆ ಬಲೂನ್ ಗಳನ್ನ ಕೂಡ ತಂದಿದ್ದಾರೆಂದು ನಂಬಿ, ಅದಕ್ಕೆ ಗಾಳಿಯನ್ನ ತುಂಬಿ ವಾಲಿಬಾಲಿನಂತೆ ಅತ್ತ ಇತ್ತ ಹಾರಿಸುತ್ತ ಆಟ ಆಡತೊಡಗಿದರು.

 ದೋ..ಘ.ನಾ. ರವರು ಕೆಲಸವನ್ನ ಮುಗಿಸಿಕೊಂಡು ಹಿಂತಿರುಗಿ ಬರುವಾಗ ದಾರಿಯಲ್ಲಿ ನಾನು ಸಿಕ್ಕಿದೆ. ಬಾ ಮಹಾರಾಯಾ ಮನೆಗೆ ಅಂದರು. ನನಗೂ ಸಾಯಂಕಾಲ ಸುದ್ದಿಹೇಳಿಕೊಂಡು ಒಂದು ಕಪ್ ಚಹಾ ಹೀರುವದು ಬೇಕಾಗಿತ್ತು. ಹೀಗೆ ನಾವಿಬ್ಬರೂ ಅದು ಇದು ಮಾತನಾಡುತ್ತ ಅವರ ಮನೆಯತ್ತ ನಡೆದೆವು. ಹಾಗೆ ಮನೆಯಂಗಳವನ್ನ ಪ್ರವೇಶಿಸಿದ ಕೂಡಲೆ ಬಲೂನಿನೊಟ್ಟಿಗೆ ಆಡುತ್ತಿರುವ ಮಕ್ಕಳನ್ನ ನೋಡಿ ದೋ.ಘ.ನಾ ರವರು ಧಿಗಿ ಧಿಗಿ ಉರಿವ ಕೆಂಡದಂತಾಗಿ ಅದರ ಪರಣಾಮದಿಂದ ತಲಾ ನಾಲ್ಕೈದು ಪೆಟ್ಟು ಮಕ್ಕಳ ಕುಂಡೆಯನ್ನ ಸೇರಿದವು. ಒಂದಿಲ್ಲೊಮ್ಮೆಲೆ ಬಿದ್ದ ಪೆಟ್ಟಿಗೆ ಗಾಬರಿಯಾದ ಮಕ್ಕಳು ಮುಗಿಲು ಮುಟ್ಟುವ ತನಕ ಚೀರಿಕೊಂಡವು. ಒಳಮನೆಯಲ್ಲಿ ಅಡುಗೆ ಕೆಲಸದಲ್ಲಿ ಮಗ್ನಳಾದ ತಾಯಿಯು ಚೀರಾಟವನ್ನ ಕಂಡು ಹೊರಗೆ ಓಡೋಡಿ ಬಂದಳು. ಆಗ ದೋ.ಘ.ನಾ ರವರು ಅಲ್ಲಲ್ಲಿ ಬಿದ್ದ ಬಲೂನನ್ನ ಹೆಕ್ಕಿ ಆಯ್ದುಕೊಳ್ಳುತ್ತಿರುವದನ್ನ ನೋಡಿ ಪರಿಸ್ಥಿತಿಯು ಏನೆಂಬುದಾಗಿ  ಅರ್ಥಮಾಡಿಕೊಂಡಳು. ನಾನು ಬೆಪ್ಪುತಕಡಿಯಂತೆ ಸುಮ್ಮನೆ ನಿಂತುಕೊಂಡಿದ್ದೆ. ಮಕ್ಕಳು ಈಗ ಓಡುತ್ತ ಅಮ್ಮನ ಮಡಿಲನ್ನ ಸೇರಿದವು. ಅನಿರೀಕ್ಷಿತವಾಗಿ ಅಮ್ಮನಿಂದಲೂ ತಲಾ ಎರಡೆರಡು ಪೆಟ್ಟು ಮಕ್ಕಳ ಅಂಡಿನ ಮೇಲೆಯೇ ಬಿದ್ದವು. ಮಕ್ಕಳಿಗೆ ಯಾಕೆ ಹೊಡೆಯುತ್ತಿದ್ದಾರೆಂಬ ಕಾರಣವು ತಿಳಿಯದೆ ಪೆಚ್ಚಾದವು. ಅಳುತ್ತಾ ಒಳಸೇರಿಕೊಂಡವು.
ಈಗ ದೋ. ಘ.ನಾ.ರವರ ಕೊಪದ ಸರದಿ ಹೆಂಡತಿಯ ಮೇಲೆ ತಿರುಗಿತು .

ನಿನ್ಗೆ ಗೊತ್ತಾಯ್ದಿಲ್ಯನೇ ಮಕ್ಕಳಿಬ್ಬರು ಅದನ್ನ ತೆಗೆದುಕೊಂಡು ಆಟ ಆಡುತ್ತ ಇರುವವರೆಗೂ ನೀನು ಯಂತಾ ಮಡ್ತಾ ಇದ್ದೆ ಮಂಗಳಂತವಳೇ ?
 ಅಂತ ಹೆಂಡತಿಗೆ  ಉಗಿಯ ತೊಡಗಿದರು.
ಹೌದ್ರ ನಿಂಗ ಅದನ್ನ ಚೀಲದಲ್ಲಿ ಇಟ್ಟಿರಿ ಹೇಳಿ ನನ್ಗೇನು ಕನ್ಸನ್ರಾ...?
ನಿಂಗ ಯಂತಾ ಹೆಡ್ರು ಹೇಳಿ ನಂಗೆ ಗೊತ್ತಾಯ್ದಿಲ್ಲೆ

 ಅನ್ನುತ್ತ ನನ್ನ ಮುಖವನ್ನ ನೋಡಿ ನಗೆಯಾಡ ತೋಡಗಿದರು, ನಾನೂ ನಗದೆ ಇನ್ನೇನೂ ಹೇಳುವ ಪರಿಸ್ಥಿತಿಯಲ್ಲೇ ಇಲ್ಲವಾಗಿದ್ದೆ. ಬೆಪ್ಪ ತಕಡಿಯ ತರಹ ನಾನೂ ನಕ್ಕೆ. ದೋ.ಘ. ನಾ ರವರೂ ಅಷ್ಟು ಹೊತ್ತಿಗೆ ತಮ್ಮ ತಪ್ಪಿನ ಅರಿವಾಗಿ ಪ್ರಸನ್ನ ಮುಖರಾಗಿದ್ದರು.

ಆದರೆ ಮಕ್ಕಳು ಮಾತ್ರ ಅಳುತ್ತಿದ್ದರು. ಎಲ್ಲವೂ ಅಯೋಮಯ. ಹೊಡೆದಿದ್ಯಾಕೆ. ಈಗ ನಗುವದ್ಯಾಕೆ ಯಾವುದನ್ನೂ ಅವರು ಅರ್ಥೈಸಲಾಗದ ಸ್ಥಿತಿಯಲ್ಲಿ  ಒಳಗಡೆ ಬಿಕ್ಕುತ್ತಾ ಕುಳಿತಿದ್ದವು.
ಇತಿ ನಿರೊಧ್ ಬಲೂನಾಯಣಂ ಸಂಪೂರ್ಣಮ್!!
ಶ್ರೀ ಬ್ಲಾಗಾರ್ಪಣಮಸ್ತು.....!

Friday, July 1, 2011

ಹಳಿ ಇಲ್ಲದ ರೈಲಿಗೆ ಒಂದು ವರ್ಷ...


ವರ್ಷಾಚರಣೆ ಸ೦ದರ್ಭದಲ್ಲಿ ಶುಭಾಶ೦ಸನೆ
ನನಗೂ ಈ ಹೆಸರಿಗೂ ಏನೋ ಅವಿನಾಭಾವದ ನ೦ಟು. ಕೆಲ ವರುಷದ ಹಿ೦ದೆ ಮಹಾಬಲಗಿರಿ ಭಟ್ಟ ಎ೦ಬ ಹೆಸರಿನ ಒಬ್ಬ ಚಾರ್ಟರ್ಡ್ ಅಕೌ೦ಟೆ೦ಟ್ ಪರಿಚಯವಾಗಿದ್ದರು. ಅವರು ಕೂಡ ಸಾಗರದ ಸೀಮೆಯವರೇ.  ಆಮೇಲೆ ಅವರೆಲ್ಲಿ ಹೋದರು, ಈಗೆಲ್ಲಿದ್ದಾರೆ ಎ೦ಬುದು ನನಗೆ ಗೊತ್ತಿಲ್ಲ, ಅದೇ ವ್ಯಕ್ತಿ ಇರಬಹುದಾ ಈ ಬ್ಲಾಗಿನ ಸೂತ್ರಧಾರ ಎ೦ಬ ಭಾವ ಈ ಬ್ಲಾಗು ನೋಡಿದ ತಕ್ಷಣ ಬಂತು.  ಆ ವ್ಯಕ್ತಿಯ ಚಿತ್ರ ಮನಸಿನ ಅ೦ಗಳದಲ್ಲಿ  ಅಯಾಚಿತವಾಗಿ ಹಾದು ಹೋಯ್ತು. ಇಲ್ಲ, ಅವರು ಇರಲಿಕ್ಕಿಲ್ಲ, ಆ ವ್ಯಕ್ತಿ ಸಾಹಿತ್ಯ-ಸ೦ಗೀತ ಅಂದರೆ ಎಣ್ಣೆ ಸೀಗೆಕಾಯಿ  ಸ೦ಬ೦ಧ. ಇದ್ಯಾರೋ ಹೊಸಬ ಅ೦ತ ಗೊತ್ತಾಗೋಕೆ ಹೆಚ್ಚು ಸಮಯ ಹಿಡೀಲಿಲ್ಲ. ನಾನು ಈ ಮಹಾಬಲನ ಬ್ಲಾಗು ನೋಡುತ್ತಲೇ ಇದ್ದೆ, ಓದುತ್ತಿದ್ದೆ, ಆದರೆ ಪ್ರತಿಕ್ರಿಯಿಸಿದ್ದು ಕಡಿಮೆ.  ಅದ್ಯಾಕೋ ಆತನ ಕವನ ಓದುತ್ತಿದ್ದರೆ, ಈತನ ಬಗ್ಗೆ ಪ್ರೀತಿ ಹೆಚ್ಚಿತು. ಅದೊ೦ದು ದಿನ ಗೂಗಲ್ ಚಾಟ್ ನಲ್ಲಿ ಹಸಿರು ದೀಪ ಬೆಳಗಿಸುತ್ತ ಈ ಭಟ್ಟರು  ಕಾಣಿಸಿಕೊ೦ಡಾಗ ಮಾತುಗಳ ವಿನಿಮಯವಾಯ್ತು. ಪರಿಚಯ ಸ್ನೇಹಕ್ಕೆ ತಿರುಗಿತು, ಅನೇಕ ಕವನಗಳ ವಿನಿಮಯವಾಯ್ತು. ನನ್ನನ್ನು "ನೀವು ನನ್ನ ಗುರು" ಅಂತ ಹೇಳೋಕೆ ಶುರು ಮಾಡಿದ ಈ ಮಹಾಬಲನ ಬಗ್ಗೆ ಪ್ರೀತಿ ಜಾಸ್ತಿಯಾಯ್ತು, ನನ್ನ ಕವನ, ಬರಹಗಳಿಗೊಬ್ಬ ಮೊದಲ ಓದುಗ, ವಿಮರ್ಶಕ ಸಿಕ್ಕಿದ್ದು ನನಗೆ ಖುಷಿ ತ೦ದಿತ್ತು. ಸ೦ಸ್ಕ್ರತದ ಟಚ್ ಇರುವ ಕಾರಣ ಇವರಲ್ಲಿ ಶಬ್ದರಾಹಿತ್ಯ ಇಲ್ಲ, ಚೆನ್ನಾಗಿ ಬರೆಯಬಲ್ಲ ಉದಯೋನ್ಮುಖ ಪ್ರತಿಭೆ. ಕೆಲವೊಮ್ಮೆ ನನಗೆ ಹೊಟ್ಟೆಕಿಚ್ಚಾಗುವಷ್ಟು ಚೆಂದದ ಕವನ ಈತ ಬರೆದದ್ದಿದೆ.  ಗದ್ಯದಲ್ಲೂ ಸೈ ಎನಿಸುವ ಶೈಲಿ. ಆದರೆ ಟೈಪಿಸುವಾಗ ಆಗುವ ಪದದೋಷ ಸರಿಪಡಿಸುವಲ್ಲಿ ಯಾಕೋ ಸ್ವಲ್ಪ ಉದಾಸೀನ ಅನ್ನುವ ಒ೦ದು ಆರೋಪ ಬಿಟ್ಟರೆ ಈತನಿಗೆ ಉಜ್ವಲ ಭವಿಷ್ಯವಿದೆ. ಬರೆಯುವ, ಕಲಿಯುವ, ಓದುವ ಹುಮ್ಮಸ್ಸಿದೆ, ಅದು ಸ೦ತೋಷದ  ವಿಷಯ.  ಬ್ಲಾಗಿಗೆ ಒ೦ದು ವರ್ಷ ತು೦ಬುತ್ತಿದೆ. ಬ್ಲಾಗೆ೦ಬುದು ಎಲ್ಲರಿಗೂ   ಹವ್ಯಾಸ. ವ್ಯಕ್ತಿಗತ ಬೆಳವಣಿಗೆಗೆ ಒ೦ದು ಚಿಮ್ಮುಹಲಗೆ ಅಷ್ಟೇ. ಇಲ್ಲಿ೦ದ ಎಲ್ಲೆಲ್ಲಿಗೋ ಲ೦ಘನ ಮಾಡಬಹುದು.  ಪರಿಚಯವ್ಯಾಪ್ತಿ ಹಿರಿದಾಗಿಸಿ ಕೊಳ್ಳಬಹುದು. ತನ್ನ ಅಭಿವ್ಯಕ್ತಿಯನ್ನು ಇತರರ ಮು೦ದಿಡುವ ಮೂಲಕ ಬರವಣಿಗೆಯ ಶೈಲಿ ಮತ್ತು  ವಿನ್ಯಾಸ ರೂಪಿಸಿಕೊಳ್ಳಲು ಸಾಧ್ಯ.  ಎಲ್ಲ ನಿಟ್ಟಿನಲ್ಲಿ ಮಹಾಬಲನ ಬ್ಲಾಗು ದಿನೇ ದಿನೇ ತನ್ನ ಮೌಲ್ಯವರ್ಧನೆ ಮಾಡಿಕೊಳ್ಳುತ್ತಿದೆ,  ಆತನ ಪ್ರತಿಭೆಯ ಪ್ರಕಾಶಕ್ಕೆ ಸೂಕ್ತ ವೇದಿಕೆ ಸಿಗಲಿ, ಹವ್ಯಾಸಕ್ಕೆ೦ದು ತೆರೆದ ಬ್ಲಾಗು ಅನವರತ ಜಾರಿಯಲ್ಲಿರಲಿ, ಉತ್ತಮ ಬರಹಗಳು ಬರಲಿ ಎ೦ಬುದಷ್ಟೇ  ನನ್ನ ಹಾರೈಕೆ.

ಪರಾಂಜಪೆ.ಕೆ.ಎನ್.

ಹಳಿ ಇಲ್ಲದ ರೈಲಿಗೆ ಒಂದುವರ್ಷದ ಸಂಭ್ರಮ
.
ಅಣ್ಣಾ ನಾನೂ ಬ್ಲಾಗ್ ಮಾಡಬೇಕೆಂದಿದ್ದೇನೆ ಅಂದ. ಹುಮ್.... ಮಾಡಪ್ಪ ಎಂದೆ. ಈ ಆಸಾಮಿ ಮಾಡುತ್ತೇನೆ ಅಂತ ಹೇಳದೇ ಇರುವ ಉದ್ಯೋಗ ಇಲ್ಲ. ಹಾಗಂತ ಸರಿಯಾಗಿ ಮಾಡಿದ ಉದ್ಯೋಗ ಯಾವುದೂ ಇಲ್ಲ. ಹಾಗೆ ಕೇಳಿಸಿಕೊಳ್ಳುವವರಿದ್ದರೆ ಮುಂದಿನ ಚುನಾವಣೆಗೆ ಎಂ.ಪಿ ಸ್ಥಾನಕ್ಕೆ ನಿಲ್ಲುತ್ತೇನೆ  ನಿನ್ನದೊಂದು ವೋಟು ಬೇಕು ಅನ್ನುವಷ್ಟರ ಮಟ್ಟಿಗೆ ಅವನ ಮಾತು ಮುಂದುವರೆಯುತ್ತದೆ. ಶುದ್ಧ ತಲೆಹರಟೆ. ಕೆಲವು ದಿನಗಳ ನಂತರ ಒಂದು ಲಿಂಕ್  ಕಳುಹಿಸಿದ. ಕರಾವಳಿ ರೈಲು. ಹೀಗೊಂದು  ಹೆಸರನ್ನ ಹೊತ್ತ ಬ್ಲಾಗಿನ ಲಿಂಕನ್ನ ಒಂದು ವರ್ಷದ ಹಿಂದೆ ಮಹಾಬಲಗಿರಿ  ನನಗೆ ಕಳುಹಿಸಿದ್ದ. ಇದರ ಹೆಸರೇ ವಿಚಿತ್ರ. ಕರಾವಳಿ ಅಲೆ, ಕರಾವಳಿ ಐಸ್ ಕ್ರೀಮ್. ಕರಾವಳಿ ಬಾರ್, ಕರಾವಳಿ ಹೋಟೆಲ್, ಹೀಗೆ ಕರಾವಳಿಯನ್ನ ತಮ್ಮ ಬ್ರಾಂಡ್ ನೇಮ್ ಮಾಡಿಕೊಂಡವರಿದ್ದಾರೆ. ಇದೆಂತಹದ್ದು ವಿಚಿತ್ರ ಕರಾವಳಿ ರೈಲು...!  ಕೊಂಕಣ ರೈಲು ಗೊತ್ತಿದೆ. ಕರಾವಳಿ ರೈಲು ಅಂತ ಹೊಸದು ಆರಂಭವಾಗಿದೆಯೋ ಅನ್ನುವ ಅನುಮಾನ ಆಯಿತು. ಕ್ಲಿಕ್ಕಿಸಿದರೆ ಗೆಳೆಯನ ಬ್ಲಾಗ್. ಚಂದದ ಬರಹಗಳಿದ್ದವು.
ಮೊದಲಿಗೇ ನಿದ್ರೆಯಬಗೆಗಿನ ಲೇಖನ. ಇದು ನಿದ್ರೆಯನ್ನ ಪ್ರೀತಿಸುವ ಇವನ ಮನನ್ಥಿತಿಗೆ ಸರಿ ಹೊಂದುವಂತಹದ್ದು. ಎಷ್ಟೋ ಬಾರಿ ಅವನಿಗೆ  ಉಗಿದು ಉಪ್ಪಿನಕಾಯಿ ಹಾಕಿದ್ದೇನೆ. ಆಲಸಿಯಾಗಿ ಕಾಲ  ಹರಣ ಮಾಡಬೇಡ ಮಹಾರಾಯಾ ಅಂತ. ಅಂದು ನಾನು ಅಂದುಕೊಂಡಿದ್ದೆ. ಅರಂಭಶೂರತ್ವದ ಮನಸ್ಥಿತಿಯವನಾದ ಈತ ಇನ್ನು ನಾಲ್ಕು ಐದು ಲೇಖನಗಳನ್ನೋ ಕವನವನ್ನೋ ಬರೆದು ಆನಂತರ ಕರಾವಳಿ ರೈಲೆಂಬ ಬ್ಲಾಗ್  ಅರಬಿಸಮುದ್ರದಲ್ಲಿ ಲೀನವಾಗಿಸಬಹುದೆಂದು. ಆದರೆ ನನ್ನೆಣಿಕೆ ಸುಳ್ಳಾಗಿಸಿದ್ದಾನೆ. ಒಂದು ಇಡೀ ವರ್ಷ ಬ್ಲಾಗ್ ನಲ್ಲಿ ಬಗೆಬಗೆಯ ಲೇಖನ, ಕಥೆ, ಕವನ, ಅಂತ ನಮ್ಮನ್ನ ರೈಲಿನಲ್ಲಿ ಕೂರಿಸಿಕೊಂಡು ಸುತ್ತಿಸಿದ್ದಾನೆ. ಮೊನ್ನೆ ಗೂಗಲ್ ಚಾಟಿನಲ್ಲಿ ಹೀಗೆ ಮಾತನಾಡುತ್ತ ಇರುವಾಗ ನೋಡೊ ನನ್ನ ಬ್ಲಾಗ್ ಆರಂಭಿಸಿ ವರುಷ ಆಯ್ತು ಅಂದ. ನಂಬಲಾಗಲಿಲ್ಲ. ಅದರೂ ನಿಜ. ಬಹುಬೇಗ ಎಕತಾನತೆಯಿಂದ ಉದ್ಯೋಗದಿಂದ ಉದ್ಯೋಗಕ್ಕೆ, ವೃತ್ತಿಯಿಂದ ವೃತ್ತಿಗೆ ಜಿಗಿಯುವ ಈತ ಒಂದು ವರ್ಷ ಬ್ಲಾಗಿಸಿದ್ದಾನೆಂದರೆ ಬಲು ಸಂತೋಷದ ವಿಚಾರವೇ ಸೈ. ಅದಕ್ಕಾಗಿಯೇ ಪ್ರೀತಿಯಿಂದ ಈ ನುಡಿಗಳನ್ನ ಬರೆಯುತ್ತಿದ್ದೇನೆ.
ಇನ್ನು ಬರೆಯವ ವಿಷಯಕ್ಕೆ ಬಂದರೆ ಗಟ್ಟಿ ವಿಷಯ ಅಥವಾ ಪ್ರಭುದ್ಧ ಲೇಖನಗಳು  ಕರಾವಳಿ ರೈಲಿನಲ್ಲಿ ಕಾಣಿಸಿಲ್ಲ. ಲೇಖನಗಳೆಲ್ಲವೂ ಒಂದು ಬಾರಿ ಓದಿಸಿಕೊಂಡು ಹೋಗುವಂತಹದ್ದು. ನಿತ್ಯ ಜೀವನದ ಘಟನೆಗಳನ್ನ ಹಿಡಿದಿಟ್ಟಿದ್ದಾನೆ. ಕವನಗಳೆಲ್ಲವೂ ಕೆಲವೊಮ್ಮೆ ಒಂದೇ ಶೈಲಿಯದಾದ್ದರಿಂದ ಬೋರು ತರಿಸುತ್ತದೆ. ಆದರೂ ಚಿತ್ರಗಳನ್ನಿಟ್ಟುಕೊಂಡು ಚಿತ್ರದ ಚೌಕಟ್ಟಿನೊಳಗೆ ಬರೆದಂತಹ ಕವನ ಕೆಲವೊಮ್ಮೆ ಇಷ್ಟ ಆಗದೇ ಇರಲಾರದು. ಸಮಯ ಸಂದರ್ಭಕ್ಕೆ ತಕ್ಕಂತೆ ಪದಗಳ ಬಳಕೆ ಕುಶಿಯನ್ನ ಕೊಡುತ್ತದೆ. ಹಗುರ ಹಾಸ್ಯ ಬಾಲ್ಯತನದ ನೆನಪು,  ಅವನದೇ ಶೈಲಿಯ ಕೆಲವು ಚಿಂತನೆಗಳು, ತಲೆಬರಹಗಳು, ಕೆಲವೊಮ್ಮೆ ಬಹಳ ನಗುವನ್ನ ತರಿಸುತ್ತದೆ. ಕೆಲವೊಮ್ಮೆ  ಸರಿಯಿಲ್ಲದ ಚನ್ನಾಗಿಲ್ಲದ ಲೇಖನಗಳಿಗೆ, ಕವನಗಳಿಗೆ, ನಾನು ನೇರವಾಗಿ ಚನ್ನಾಗಿಲ್ಲ ಅಂತ ಹೇಳಿದ್ದೇನೆ.  ಇನ್ನು ಕೆಲವೊಮ್ಮೆ ಸ್ನೇಹತನದ ಕಟ್ಟುಪಾಡಿಗೋಸ್ಕರ ಚೆನ್ನಾಗಿದೆ ಚೆನ್ನಾಗಿದೆ ಅಂತ ಹೇಳಿದ್ದೇನೆ. ನನ್ನಂತೆ ಬ್ಲಾಗ್ ಓದುಗರು ಮತ್ತು ಬ್ಲಾಗ್ ಬರಹಗಾರರೆಲ್ಲರೂ ಚನ್ನಾಗಿಲ್ಲದ ಬರಹಗಳಿಗೆ ಚನ್ನಾಗಿದೆ ಅನ್ನುವ ಮಾತನ್ನ ಮತ್ತು ಕಾಮೆಂಟನ್ನ  ಹಾಕುವದು ಎಲ್ಲರಿಗೂ ತಿಳಿದದ್ದೇ ಆಗಿದೆ. ಕರಾವಳಿ ರೈಲಿನಲ್ಲಿ ಇನ್ನಾದರೂ ಒಳ್ಳೆಯ ಗಟ್ಟಿ ಪ್ರಬುದ್ಧ ಅಧ್ಯಯನಶೀಲತೆಯಿಂದ ಬರೆದ ಲೇಖನಗಳು ಕವನಗಳು ಬರಲಿ ಅಂತ ನನ್ನ ಹಾರೈಕೆ ಮತ್ತು ನಿರೀಕ್ಷೆ.
ಇನ್ನು ಓದುವ ವಿಷಯಕ್ಕೆ ಬಂದರೆ. ದಿನದ ಬಹೆತೇಕ ಹೆಚ್ಚಿನ ಸಮಯವನ್ನ ಕಂಪ್ಯೂಟರ್ ಪರೆದಯ ಮೇಲೆ ಕಣ್ಣು ನೆಟ್ಟಿರುವ ಸಾಹಿತ್ಯಾಸಕ್ತರನ್ನ ಹಿಡಿದಿಡುವಲ್ಲಿ ಬ್ಲಾಗ್ ಎಂಬ ಮಾಯಾಜಾಲ ಸಫಲವಾದೀತೆ ಹೊರತು ಅದಕ್ಕೆ ಹೆಚ್ಚಿನ ತೆರೆದ ಓದುಗರ ಬಳಗವಿಲ್ಲ. ಇಂತಹ ವೇದಿಕೆ ಸೀಮಿತವಾದರೂ ಅಂಬೆಗಾಲಡುತ್ತಿರುವರಿಗೆ ಮತ್ತು ಪ್ರಾಥಮಿಕ ಹಂತದಲ್ಲಿ ಬರೆಯುತ್ತಿರುವವರಿಗೆ ಒಂದು ಅದ್ಭುತ ವೇದಿಕೆ. ಇದರ ಪ್ರಯೋಜನವನ್ನ ಪೂರ್ತಿಯಾಗಿ ಬಳಸಿಕೊಂಡು ಓದುಗನಿಗೆ ಹಿತವೆನಿಸುವದನ್ನ ಕೊಡುವ ಹೊಣೆಗಾರಿಕೆ ಬ್ಲಾಗಿಗರ ಮೇಲಿದೆ. ಕೆಲವೊಮ್ಮೆ ಕೆಲಸದ ವೇಳೆಯ ಮಧ್ಯದಲ್ಲಿ ಕಂಪ್ಯೂಟರ್ ಪರದೆಯ ಮೇಲೆ ಬರುವ ಕ್ಷಣಾರ್ಧದಲ್ಲಿ ಓದಿ ಮುಗಿಸುವ ಲೇಖನಗಳು ಉಪಯುಕ್ತವಾಗಿಯೂ ಕುಶಿಕೊಡುವಂತಹದ್ದಾಗಿದ್ದರೆ ಯಾರುತಾನೇ ಓದುವದಿಲ್ಲ. ಇಂತಹ ಲೇಖನಗಳು ಕವನಗಳು ಕರಾವಳಿ ರೈಲಿನಲ್ಲಿ ಬರಲಿ. ಕರಾವಳಿ ರೈಲು ನಿಲ್ಲದೇ ಚಲಿಸಲಿ ಅಂತ ನನ್ನ ಹಾರೈಕೆ.
ಉದಯ ಹೆಗ್ಡೆ



ಎಲ್ಲರು ಓದಲಿ ಅಂತೆಲೇ ನಾನು ಬರೆಯುವದು.

ಹೀಗೊಂದು ಉಡಾಪೆಯ ಮಾತು ಅನಿಸಬಹುದು. ಅದರೆ ನಿಜವಾದದ್ದು. ಯಾರದ್ದೋ  ಪ್ರಭಾವದ ಸರಕನ್ನ ನನ್ನ ತಲೆಯಲ್ಲಿ ಬಟ್ಟಿ ಇಳಿಸಿ. ಒಂದು ಪ್ಯಾರ ನೀಟಾಗಿ ಬರೆಯದೆ. ಬರೆದ ಕೆಲವು ಕಾಗುಣಿತ ತಪ್ಪಿರುವ ಅಕ್ಷರವನ್ನ ಎಗ್ಗಿಲ್ಲದೇ ಬ್ಲಾಗಿನಲ್ಲಿ ಹರಿದುಬಿಡುತ್ತೇನೆ. ಇಣುಕಿದವರೆಷ್ತ್ಟೆಂದು ನೋಡುತ್ತೇನೆ. ಕಾಮೆಂಟು ಎಷ್ಟಾಯಿತೆಂದು ಲೆಕ್ಕ ಹಾಕ್ತೇನೆ. ಫಲೊವರ್ಸ್ಎಷ್ಟು  ಆಗಿದ್ದಾರೆ  ಅಂತ ದಿನಾ ದಿನಾ ಲೆಕ್ಕ ಇಟ್ಗೊಂಡಿರ್ತೇನೆ. ಭಟ್ರೇ ನಿಮ್ಮ ಬರವಣಿಗೆ ಚನ್ನಾಗಿದೆ ಅಂದ್ರೆ ಸಂತಸದಿಂದ ಒಂದು ಕಪ್ಪು ಟೀ ಹೆಚ್ಚು ತರ್ಸ್ಕೊಂಡು ಕುಡಿಯುತ್ತೇನೆ. ಬಜ್ ನಲ್ಲಿ, ಪೇಸ್ ಬುಕ್ಕಿನಲ್ಲಿ, ಕಂಡ ಕಂಡ ಸ್ಥಳದಲ್ಲಿ ನನ್ನ ಲಿಂಕನ್ನ ಹಾಕುತ್ತೆನೆ. ಅಂಟಿಸ್ತೇನೆ. ಗೆಳೆಯರಿಗೆ ಓದಿ ಅಂತ ದುಂಬಾಲು ಬೀಳ್ತೇನೆ. ಇಂತಿರ್ಪ ನಾನು ಎಲ್ಲರೂ ಓದಲೀ ಅಂತಲೇ ಅಲ್ಲವೇ ಬ್ಲಾಗಿನಲ್ಲಿ ಬರೆಯುವದು...?  ಹಾಗೆಂದು ಹೇಳಿ ಕೊಂಡರೆ ತಪ್ಪಾಗಲಾರದು. ಒಂದು ಸತ್ಯವನ್ನ ಹೇಳುತ್ತಿದ್ದೇನೆಂಬ ಸಂತೋಷ ನನಗಿದೆ. ಓದುವದು ಬಿಡುವದು, ಮೆಚ್ಚುವದು ನೆಚ್ಚುವದು, ನಿಮಗೆ ಬಿಟ್ಟದ್ದಾದರೂ ನಾನು ಮಾತ್ರ ಎಲ್ಲರೂ ಓದಲಿ ಅಂತೆಲೇ ಬರೆಯುವದು.
ಬಾಲಭಾಷೆಗಳು, ತಪ್ಪುಗಳು, ವಿಷಯಾಭಾಸಗಳು,ಅಶುದ್ಧ ಪ್ರಯೋಗ, ಕವನ ಅಂತ ತಲೆಬರಹ ಕೊಟ್ಟು ಬರೆದ ಪ್ರಲಾಪಗಳು, ಕಥೆ ಅಂತ ಕರೆದ ಚಿಂತಾಜನ ಸರಕುಗಳು, ಹಾಸ್ಯ ಅಂತ ಹೇಳಿ ದುಖಃ ವನ್ನ ಬರಿಸಿದ್ದು. ಇದೆಲ್ಲವೂ ನನ್ನ ಒಂದು ವರ್ಷದ ಬ್ಲಾಗ್ ಲೋಕದ ಸ್ಥೂಲ ಪರಿಚಯ. ಇದೆಲ್ಲವನ್ನ ಮೆಚ್ಚಿ, ಅಹುದೌದೆಂದು ತಲೆಯಾಡಿಸಿ ಸೂಪರ್ ಗುರ್ವೆ ಅಂದು ಬೆನ್ನು ತಟ್ಟಿದ್ದೀರಿ. ಅದು ನಿಮ್ಮ ದೊಡ್ಡತನ. ನಿಮ್ಮ ದೊಡ್ಡ ತನದ  ಮುಂದೆ ನಾನೆಂದೂ ಚಿಕ್ಕವನೆ. ನನ್ನ ಅಧಿಕಪ್ರಸಂಗವನ್ನ ಸಹಿಸಿದ್ದಕ್ಕೆ ನಿಮಗಲ್ಲರಿಗೂ ಧನ್ಯವಾದಗಳು.


ಪ್ರೀತಿಯಿಂದ ನಿಮ್ಮವ

ಮಹಾಬಲಗಿರಿ ಭಟ್




Thursday, June 23, 2011

ಗುಂಡಬಾಳ ಯಕ್ಷಗಾನ – ಶೆಟ್ರಂಗಡಿ ಮಿಸಾಳ್ ಬಾಜಿ


ಯಕ್ಷಗಾನ ಅದೊಂದು ಅದ್ಭುತ ಕಲೆ ಇಲ್ಲಿ ನಾಟ್ಯ, ನೃತ್ಯ, ಮಾತುಗಾರಿಕೆ, ವೇಶಭೂಷಣ, ಸಂಗೀತ, ವಾಧ್ಯಸಂಗೀತ, ತಾಳ, ರಂಗ ಚೌಕಟ್ಟು, ಮುಖ ವರ್ಣಿಕೆ,  ಸಾಹಿತ್ಯ  ಏನೇನು ಇದೆ ಅಂತ ಪಟ್ಟಿಮಾಡಿ ಹೇಳುವದಕ್ಕಿಂತ ಎಲ್ಲವೂ ಇದೆ ಅಂತ ಒಂದೇ ಮಾತಿನಲ್ಲಿ ಮುಗಿಸಿದರೆ ಸಮಂಜಸವಾದೀತು. ಕೆಲವು ಹಿಂದುಸ್ಥಾನಿ ಸಂಗೀತ,ಮತ್ತು ಕೆಲವು ಕರ್ನಾಟಕೀಯ ಸಂಗೀತದಿಂದ ಪ್ರಭಾವಿತವಾದ ಹಾಡುಗಳಾದರೂ,ಯಕ್ಷಗಾನದ ರಾಗ ಮತ್ತು ತಾಳ ಬೇರೆ ಬೇರೆ, ಗೆಳೆಯನ ಮಾತು ಹೀಗೆ ಮುಂದುವರೆಯುತ್ತದೆ.........
 ನೋಡು ಮಹಾಬಲ ........ ನಮ್ಮ ಊರಿನ ವೆಂಕಟೇಶನೇ ಉದಾಹರಣೆಗೆ  ತಗಾ. ಅವಂಗೆ ಓದುಲೆ ಬತ್ತಿಲ್ಲೆ. ಬರುಲಕ್ಕೆ ಬತ್ತಿಲ್ಲೆ, ಆದ್ರೂವಾ ಅವ ಮಹಾಭಾರತ, ರಾಮಾಯಣ, ಅಲ್ಲದೇ ಪುರಾಣದ ಕಥೆಗಳನ್ನ ಎಷ್ಟು ಚಂದಾ ಮಾಡಿ ಹೇಳ್ತಾ. ಮತ್ತೆ ಅದರ ಬಗ್ಗೆ ತಿಳ್ಕಂಡ್ದಾ. ಅದೆಲ್ಲವೂ ಯಕ್ಷಗಾನದಿಂದಲೆ ಪಡೆದದ್ದು. ಮುಂದೆ ಹೇಳಲು ತೊಡಗುತ್ತಾನೆ ............ ಮಿತ್ರ ವಿನಯ
ಬುಸು ಬುಸು ಉಸಿರು. .....ನಾನು ಮಂದುವರಿಸಿದೆ ...... ಹೇ ....! ಅದು  ಹೌದು. ಆದ್ರೂವಾ.... ಯಕ್ಷಗಾನದಲ್ಲಿ ರಾಮಾಯಣ, ಮಹಾಭಾರತ  ಮತ್ತೆ ಪುರಾಣ ಕಥೆಗಳನ್ನ ಬುಡ್ದಿಂದ ತಲೆವರೆಗೆ ಅದ್ರಲ್ಲಿ ಹ್ಯಾಂಗಿದ್ದೋ ಹಾಂಗೆ ಆಟ ಆಡ್ತ್ವಿಲ್ಲೆ. ಅಲ್ಲಲ್ಲಿ ಕೆಲವು ಇಂಟರೆಷ್ಟಿಂಗ್ ಭಾಗ ತಗಂಡು ಬೇಕಾದ ಭಾಗ ಅಯ್ಕೆ ಮಾಡ್ಕಂಡು ಯಕ್ಷಗಾನ ತೋರಸ್ತೊ. ಅದು ಪೂರ್ತಿ ಆಗ್ತಿಲ್ಲೆ. ಅದ್ಕಾಗಿ ವೆಂಕಟೇಶನಿಗೆ ಪಾಪ ಪುರಾಣ ಮಹಾಭಾರತ, ರಾಮಾಯಣದ ಪೂರ್ತಿ ಕಥೆ ಗೊತ್ತೇ ಇಲ್ಲೆ. ಅವ ರಾಮಾಯಣ ಮಹಾಭಾರತ ಪುರಾಣ ಅಂದ್ರೆ ಯಕ್ಷಗಾನದಲ್ಲಿ ಬಪ್ಪಷ್ಟೇಯಾ ಹೇಳಿ ಮಾಡ್ಕಂಡಿದ್ದಾ. ಇನ್ನೂ ಎಷ್ಟೆಷ್ಟೋ ಕಥೆ ಇದ್ದು. ಅದರ ಪೂರ್ತಿಯಾಗಿ ಓದಿದ್ರೆ ಸಿಕ್ಕು ಸಾರಾಂಶವೇ ಬೇರೆ.
ಇನ್ನೂ ಒಂದು .... ನಮ್ಮಲ್ಲಿ ವಾಲಿ ಸುಗ್ರೀವ ಆಟ ಆಡ್ತಿದ್ದ ಅಂತಿಟ್ಕಾ. ಅಲ್ಲಿ ವಾಲಿ ಮಾಡಿದವ ಮಾತಿನಲ್ಲಿ ಜೋರಿದ್ದರೆ ಅಥವಾ ನುರಿತ ಅರ್ಥಧಾರಿ ಅಗಿದ್ದರೆ  ವಾಲಿಯದು ತಪ್ಪೇ ಇಲ್ಲೆ, ರಾಮಂದೇ ತಪ್ಪು ಅನ್ನುವಹಾಗೆ ಮಾತಾಡ್ತ. ಅವಾಗ ವಾಲಿಯ ಧ್ಯೇಯ ಸರಿ ರಾಮಂದು ತಪ್ಪು ಅಂತ ವೆಂಕಟೇಶನ ತಲೆಯಲ್ಲಿ ನಿರ್ಧಾರ ಆಗ್ತು. ಅವ ಮತ್ತೆ ಅದೇ ವಾಲಿಸುಗ್ರೀವ ಕಾಳಗವನ್ನ ಮತ್ತೊಮ್ಮೆ ನೋಡಿದಾ ಅಂತಾದರೆ. ಇಂದು ರಾಮನ ಪಾತ್ರ ಮಾಡಿದವ ಗಟ್ಟಿ ಅರ್ಥಧಾರಿ ಆಗಿದ್ರೆ ರಾಮಂದು ತಪ್ಪಿಲ್ಲೆ ವಾಲಿದೇ ತಪ್ಪು ಹೇಳಿ ವೆಂಕಟೆಶನ ತಲೆಯಲ್ಲಿ ಗೊಂದಲ ಉಂಟಾಗ್ತು. ಇನ್ನೂ ಒಂದು ಮಾತು ಎಂತದು ಅಂದ್ರೆ ಕೆಲವು ಯಕ್ಷಗಾನದಲ್ಲಿ ಇದ್ದ ಕಥೆಗೂ ಮತ್ತು ಮೂಲಕಥೆಗೂ ವ್ಯತ್ಯಾಸ ಇದ್ದು. ಆಗ ಯಕ್ಷಗಾನದಿಂದ ಪುರಾಣ ರಾಮಾಯಣ ಮಹಾಭಾರತದ ಸ್ಪಷ್ಟ ಸಂದೇಶ ಸಾಮಾನ್ಯ ಜನಕ್ಕೆ ತಲ್ಪ್ತಿಲ್ಲೆ.

ಮಾತನ್ನ ತುಂಡರಿಸಿ ಗೆಳೆಯನ ಮಾತು ಆರಂಭವಾಯಿತು..... ಹೇ ಹಾಗೇನಿಲ್ಲ ಮಹಾರಾಯ, ಅನಕ್ಷರಸ್ಥರಿಗೆ ಮತ್ತೆ ಸಾಮಾನ್ಯ ಜನಕ್ಕೆ ಈಗಿನ ಕಾಲದಲ್ಲಿ ನಮ್ಮ ಪುರಾಣ, ರಾಮಾಯಣ, ಮಹಾಭಾರತ ಕಥೆ ಕೆಲವೊಂದಿಷ್ಟಾದರೂ ಯಕ್ಷಗಾನದ ಮೂಲಕ ತಲಪ್ತಾ ಇದ್ದು. ಈಗಿನ ಎಲೆಕ್ಟ್ರಾನಿಕ್ ಮಾಧ್ಯಮ, ಸಿನಿಮಾ, ದಾರಾವಾಹಿಗಳು ಈ ಕೆಲ್ಸ  ಮಾಡ್ತಾ ಇಲ್ಲೆ. ಇನ್ನು ಭಾಷಾ ವಿಷಯಕ್ಕೆ ಬಂದರೆ ಯಾವುದೇ ಸಿನಿಮಾ ನೋಡು, ನೂರು ಮಾತಲ್ಲಿ ಶೇಕಡಾ 60 ಇಂಗ್ಲಿಷ್ ಮಾತುಗಳು. ಕನ್ನಡ ಭಾಷೆ ನಿಧಾನಕ್ಕೆ ಇಂಗ್ಲಿಷ್ನೊಟ್ಟಿಗೆ ಬೆರ್ತು ತನ್ನ ತನವನ್ನ ಕಳೆದುಕೊಳ್ತಾ ಇದ್ದು. ಮತ್ತೆ ಕೆಲವು ಕನ್ನಡ ಶಬ್ಧಗಳ ಪರ್ಯಾಯ ಶಬ್ಧವಾಗಿ ಇಂಗ್ಲಿಷನ್ನ ಕನ್ನಡ ಭಾಷೆಗೆ ಒತ್ತಾಯ ಪೂರ್ವಕ ಸೇರ್ಸಿಕಿದ. ಇನ್ನೊಂದು ಸ್ವಲ್ಪ ವರ್ಷ ಹೋದರೆ ಕರ್ನಾಟಕದಲ್ಲಿ  ಬಿಡುಗಡೆ ಆಪ ಸಿನಿಮಾ ದಾರಾವಾಹಿ ಮಧ್ಯೆ ಅಲ್ಲಲ್ಲಿ ಒಂದೂಂದು ಕನ್ನಡ ಪದ ಇರ್ತು. ಸಂಭಾಷಣೆ ಹಾಳಾಗ್ಲಿ. ಇಗೀಗ ಬಪ್ಪ ಚಿತ್ರಗೀತೆ ನೋಡು ಅದ್ರಲ್ಲಿ ಕನ್ನಡ ಪದವನ್ನ  ಭೂತ ಕನ್ನಡಿ ಹಿಡ್ಕಂಡು ಹುಡ್ಕ ಪರಿಸ್ಥಿತಿ ಬಂದು. ಆದರೆ ಅಂದಿನ ಕಾಲದಿಂದ ಇಂದಿನ ಕಾಲದವರೆಗೆ ಇಂಗ್ಲಿಷನ್ನ ಬದಿಗಿಟ್ಟು  ಕನ್ನಡಭಾಷೆ ಒಂದನ್ನೇ ಬಳಸುತ್ತಾ ಇರುವಂತ ಕಲೆ ಯಕ್ಷಗಾನ ಮಾತ್ರ. ಅದು ಕನ್ನಡ ಭಾಷಾಬೆಳವಣಿಗೆಗೆ ತನ್ನದೇ ಆದ ಕೊಡುಗೆ ಕೊಡ್ತಾ ಇದ್ದು ಮಹಾರಾಯ ಅಂತ ವಿನಯನ ಮಾತು ನಿಂತಿತು.......
ಅಷ್ಟು ಹೊತ್ತಿಗೆ ಕೈಗಡಿಯಾರ ರಾತ್ರಿ ಹನ್ನೊಂದು ಘಂಟೆ ತೋರಿಸ್ತಾ ಇತ್ತು. ಕೈಯಲ್ಲಿ ಎರಡೆರಡು ಕರೆಂಟ್ ಬ್ಯಾಟ್ರಿ. ಒಂದು ದೊಡ್ಡ ಘಟ್ಟವನ್ನ ಹತ್ತಿ ಮತ್ತೆ ಇಳುಕಲು ದಾರಿಯಲ್ಲಿ ಬರಬರ  ಹೆಜ್ಜೆ ಹಾಕುತ್ತಾ ಇದ್ದೆವು.  ಇಬ್ಬರ ಬಾಯಲ್ಲೂ ಬರೋಬ್ಬರಿ ಉಸಿರು. ಮೌನ ನೀರವ ರಾತ್ರಿಯ ಪರಿಸರ. ಇಬ್ಬರ ಬಾಯಿಂದ ಬುಸು ಬುಸು ಶಬ್ಧ.

ಒಹ್....! ತಲೆ ಬುಡ ಅರ್ಥ ಆಗಿಲ್ಲ ಅಲ್ವಾ....? ಮೊದಲಿಗೆ ವಾದದ ಸರಣಿ ಪ್ರಸ್ತಾಪಿಸಿದರೆ, ಕೊನೆ ಕೊನೆಗೆ ಯಾವುದೋ ರಾತ್ರಿಯಲ್ಲಿ ನಾವಿಬ್ಬರು ನಡೆದುಕೊಂಡು ಹೋಗುತ್ತಿರುವದನ್ನ ವರ್ಣನೆ ಮಾಡುತ್ತಿದ್ದೆ. ಮತ್ತೆ ಯಕ್ಷಗಾನಾದ ಬಗ್ಗೆ ನಿಮ್ಮ ತಲೆಯಲ್ಲಿ ಹುಳಾ ಬಿಡ್ತಾ ಇದ್ದೇನೆ ಅನಿಸುತ್ತಿದ್ಯಾ...? ಉಹೂಂ…….! ನಾನು ಹೇಳಲಿಕ್ಕೆ ಹೊರಟಿರುವದು ಯಕ್ಷಗಾನದ ವಿಷಯಾನೂ ಅಲ್ಲ. ಅದರಬಗ್ಗೆ ವಿದ್ವತ್ ಪೂರ್ಣ ಲೇಖನವೂ ಅಲ್ಲ. ವಿನಯ ಮತ್ತು ನನ್ನ ಮಧ್ಯೆ  ಯಕ್ಷಗಾನದ ಬಗ್ಗೆ ನಡೆದ ವಾದದ ಯತಾವತ್ ದಾಖಲೆಯೂ ಅಲ್ಲ. ನಾನು ಹೇಳಲು ಹೊರಟಿರುವದು ಗುಂಡಬಾಳ ಶೆಟ್ಟರ ಅಂಗಡಿಯ ಮಿಸಾಳ್ ಬಾಜಿ ಕಥೆ.
ಎಪ್ರಲ್ ಮೇ ತಿಂಗಳಲ್ಲಿ ಊರಿಗೆ ಹೋದೆವೆಂದರೆ ಅಲ್ಲಿ ಬೇರೆಯದೇ ಲೋಕ ಸೃಷ್ಟಿಯಾಗುತ್ತದೆ. ಅದರಲ್ಲೂ ಬೇರೆ ಬೇರೆ ಊರಿನಲ್ಲಿರುವ ಗೆಳೆಯರು ಒಂದುಕಡೆ ಕಲೆತರೆ ಸಾಕು. ಅಲ್ಲಿ ಒಂದು ಮಿನಿ ಸ್ವರ್ಗವೇ ನಿರ್ಮಾಣ ಆಗುತ್ತದೆ. ಮೊನ್ನೆ ಗೆಳೆಯನ ಮದುವೆಯ ನೆಪದಲ್ಲಿ ಊರಿಗೆ ಹೋಗಿದ್ದೆ. ಮದುವೆಯ ಹಿಂದಿನ ದಿನ ಗೆಳೆಯನ ಮನೆಯಲ್ಲೇ ಓಡಾಡಿಕೊಂಡಿದ್ದೆ. ಅಂದಿನ ರಾತ್ರಿ ಹನ್ನೆರಡು ಘಂಟೆಗೆ ಸಿರ್ಸಿಯಿಂದ ಬಂದಿಳಿದ ಮತ್ತೋರ್ವ ಗೆಳೆಯನನ್ನ ಹೊನ್ನಾವರದಿಂದ ಬೈಕಿನಲ್ಲಿ ಕರೆದುಕೊಂಡು ಬಂದು ಮಲಗಲು ರಾತ್ರಿ ಒಂದು ಮೂವತ್ತು ಘಂಟೆ. ಬೆಳಿಗ್ಗೆ ಆರು ಘಂಟೆಗೆ ಎದ್ದು ಪಟಾ ಪಟ್ ತಯಾರಾಗಿ ಎಂಟು ಮೂವತ್ತರ ಸುಮಾರಿಗೆ ಮದುವೆ ಮನೆಗೆ ಹಾಜೀರ್. ಅಸ್ಟೊತ್ತಿಗಾಗಲೇ ಗೆಳೆಯ ಬಾಸಿಂಗ ಕಟ್ಟುಕೊಂಡು ತೇಲಿಬರುವ ವಾಧ್ಯಶಬ್ಧಕ್ಕೆ ಮನಸ್ಸಿನಲ್ಲೇ ಹೆಂಡ್ತಿ ಆಗುವವಳ ನೆನೆಸ್ಕಂಡು ಡುಯೆಟ್ ಹಾಡಲು ಆರಂಭಿಸಿದ್ದ.

ನಿಮಗೆಲ್ಲ ಗೊತ್ತೇ ಇದೆ. ಬೇಸಿಗೆಯ ಮದುವೆ ಮನೆಯ ಭಯಂಕರ  ಸುಸ್ತು.  ಮಾಡಲು ಏನೂ ಕೆಲಸ ಇಲ್ಲದಿದ್ದರೂ ಆ ಕಡೆ ಈ ಕಡೆ ಓಡಾಡಿ, ಸಾವಿರ ಜನರನ್ನ ಮಾತಾಡಿಸಿ. ಬಂದಿರುವ ಜನರ ಮಧ್ಯದಲ್ಲಿ  ಹುಡ್ಗೀರನ್ನ ಹೆಕ್ಕಿ ಹೆಕ್ಕಿ ತೆಗೆದು, ಅಳೆದು ತೂಗಿ ಕಣ್ಣನ್ನ ಮಿಟುಕಿಸಿ, ಕಣ್ಣನ್ನ ಆ ಕಡೆ ಈ ಕಡೆ ತಿರುಗಿಸಿ ತಿರುಗಿಸಿ, ನೋಡಿ ನೋಡಿ, ಕಣ್ಣು ಕೆಂಪಾಗಿರುತ್ತೆ. ಮಧ್ಯದಲ್ಲಿ ನಿಂಬೆಹಣ್ಣು ಶರಬತ್ತು, ಒಂದು ಸಿಂಗಲ್ ಕಪ್ಪು ಚಹಾ, ಕವಳ  ಅದು ಇದೂ ಅಂತ ಉಧರಕ್ಕೂ ಸಕ್ಕತ್ ಕೆಲಸ ಕೊಟ್ಟಿರ್ತೇವೆ. ಬಂದವರಲ್ಲಿ ಅನೇಕರು ಪರಿಚಯಸ್ಥರು. ಎಷ್ಟೋವರ್ಷಗಳ ನಂತರ ಇವತ್ತು ಸಿಕ್ಕಿದ್ದಾರೆ. ಹಾಗೆ ಒಬ್ಬೊಬ್ಬರಲ್ಲಿ ಒಂದು, ಎರಡು, ಮೂರು ಅಂದ್ರೂ ಆವತ್ತಿನ ಮಾತು ದಿನನಿತ್ಯ ಮಾತಾನಾಡುವದಕ್ಕಿಂತ ಮೂವತ್ತು ಪಟ್ಟು ಹೆಚ್ಚಾಗಿರುತ್ತದೆ. ಯಾವಾಗಲೋ ನೋಡಿದ ಮುಖವನ್ನ ನೆನಪಿಸ್ಕಂಡು, ನೆನಪಿಸ್ಕಂಡು, ಮತ್ತೆ ಫೋಟೊನೂ ತೆಗ್ದು ತೆಗ್ದು, ಅಲ್ಲಲ್ಲಿ ಕೂತ ಹುಡ್ಗೀರ ಬಗ್ಗೆ ತಲೆ ಕೆಡ್ಸ್ಕಂಡು, ಒಬ್ಬೊಬ್ಬರ ಬಗ್ಗೆ ಒಂದೊಂದು ಕಥೆ ನೆನ್ಪಾಗಿ, ನಮ್ಮ ಮಿದುಳಿಗೆ ಬಿಡುವಿಲ್ಲದ ಕೆಲ್ಸ ಕೊಟ್ಟಿದ್ದರಿಂದ ತಲೆ ಬಿಸಿಯಾಗಿ, ಎಲ್ಲಾ ಹಳೆ ಮೆಮೋರಿನೂ ಒಂದೇ ಬಾರಿ ಒಪನ್ ಮಾಡಿದ್ದರಿಂದ ತಲೆ ಎಂಬ ಸಿಸ್ಟಮ್ ನಿಧಾನ ಆಗ್ತಿದೆ ಅನ್ನುವಾಗ ಹೊಸ ಹುಡ್ಗೀರ್ ಎಂಬ ಹೋಸಾ ಸಾಫ್ಟ್ ವೇರನ್ನ ಹಾರ್ಡ ಡಿಸ್ಕಿನಲ್ಲಿ ಇನ್ಸ್ಟಾಲ್ ಮಾಡುವ ಹೊತ್ತಿಗೆ ತಲೆಯೆಂಬ ಕಂಪ್ಯೂಟರ್ ಜಾಮ್ ಆಗಿ ಹ್ಯಾಂಗ್ ಆಗಿಬಿಡುತ್ತೆ. ಅದೇನಾದ್ರು ನಮ್ಮ ಪೈಪೋಟಿ ಗೆಳೆಯರೆಂಬ ವೈರಸ್ ಅಟ್ಯಾಕ್ ಆಯ್ತೋ ಮುಗಿತ್ ಕಥೆ. ಫುಲ್ ತಲೆಯಂಬ ಕಂಪ್ಯೂಟರ್ ಆಫ್ ಆಗಿಬಿಡುತ್ತೆ. ಮತ್ತೆ ಆ ಭಯಂಕರ ಸೆಕೆಯಲ್ಲಿ ಪಂಕ್ತಿಯಲ್ಲಿ  ಮರೆತು ಹೋದ ಚಕ್ಲುಪಟ್ಟೆ ಹಾಕಿಕೊಂಡು ಬಿಸಿ ಬಿಸಿ ಊಟಮಾಡುವಾಗ ಎದುರು ಪಂಕ್ತಿಯಲ್ಲಿ ಕುಳಿತ  ಪಕ್ಕದಮನೆ ಸುಬ್ಬಾ ಭಟ್ಟರು ನಮ್ಮನ್ನೇ ನೋಡ್ತಾ ಇರ್ತಾರೆ. ಬೆಂಗಳೂರಿಂದ ಬಂದ ಮಾಣಿ ಧರಿಸಿ (ಅನ್ನ ಪರಿಷೇಚನೆ ಮಾಡಿ) ಊಟ ಮಾಡುತ್ತಾನೋ, ಅಥವಾ ಹಾಗೇ ಮುಕ್ತಾನೋ ಅಂತ ಹದ್ದಿನ ಕಣ್ಣಿಟ್ಟಿರ್ತಾರೆ. ಕೈಯ್ಯಲ್ಲಿ ನೀರು ಹಾಕಿಕೊಂಡು ಅನ್ನಕ್ಕೆ ಸುತ್ತುಗಟ್ಟಿ ಪರಿಷೇಚನೆ ಮಾಡಿ ಅನ್ನ ಕಲಸಿ ಬಾಯಿಗಿಡುವ ಹೊತ್ತಿಗೆ ಗೆಳೆಯನ ಅಣ್ಣ ದಪ ದಪಾ ಅಂತ ಬಂದು ಸ್ವೀಟನ್ನ  ಬಾಳೆಗೆ ಸುರಿತಾನೆ. ಎಲ್ಲವನ್ನ ನೀಟಾಗಿ ಹೊಟ್ಟೆಗೆ ಇಳಿಸಿಕೊಂಡು ಕುಡ್ಯೋ ತಂಬುಳಿ ಕುಡ್ಕಂಡು ಕೊನೆಯಲ್ಲಿ ಉತ್ತರಾಪೋಶನ ತೆಗೆದುಕೊಂಡು ಊಟ ಬಡಿಸಲು ಬಂದ ಈ ವರ್ಷ ಸೆಕೆಂಡ್ ಇಯರ್ ಪಿ.ಯು.ಸಿಗೆ ಸೇರಿದ ಆ ಪಕ್ಕದಮನೆ ಅಡುಗೆಸುಬ್ಬಕ್ಕನ ಮಗಳ ಮುಖವನ್ನ ತಲೆಯಲ್ಲಿ ಫೀಡ್ ಮಾಡ್ಕಂಡು ಊಟದಿಂದ  ಏಳುವತನಕ ಸಾಕು ಸಾಕು ಸುಸ್ತು ಸುಸ್ತು.  ನೋಡಿ.. ಮದುವೆ ಮನೆಯಲ್ಲಿ ಏನೂ ಕೆಲಸ ಮಾಡದೇ ಇದ್ರೂ ಸುಸ್ತಾಗೋದು ಇದಕ್ಕೆ. ಇಂತಹ ಸುಸ್ತನ್ನ ಹೊತ್ತುಕೊಂಡು ಹಾ...! ದೋಸ್ತಾ ಹೊರ್ಡ್ತೇನೆ ಅನ್ನುವಾಗ ಮರುದಿನ ಮನೆಯಲ್ಲಿ ಊಟ ಇದೆ ಬರ್ಲೇ ಬೇಕು ಅನ್ನುವ ಗೆಳೆಯನ ಒತ್ತಾಯಕ್ಕೆ ಹೂಂ... ಹಾಕಿ ಮನೆಗೆ ಬಂದು ಮಂಚದ ಮೇಲೆ ಕುಳಿತುಕೊಂಡೆ. ಹಾಗೇ ಅಲ್ಲಿಯೇ ನಿದ್ರಾ ಲೋಕಕ್ಕೆ ಜಾರಿಕೊಂಡಾಗಿತ್ತು.
ರಾತ್ರಿ ಎಂಟು ಘಂಟೆಗೆ ಅಪ್ಪ ಮಾಣಿ ಊಟಕ್ಕೆ ಬಾರ ಎಂದು ಕರೆದಾಗಲೇ ಎಚ್ಚರವಾದದ್ದು. ಇಲ್ಯೋ ನನಗೆ ಊಟ ಬ್ಯಾಡಾ ಮಹಾರಾಯ ಎಂದೆ.    ಹಾಂಗದ್ರೆ ಹ್ಯಾಂಗ  ಅಂತ ಹೇಳಿದ ಅಪ್ಪನ ಪ್ರೀತಿಯ ಕರೆಗೆ ಅಂತೂ ಇಂತು ಅಡಿಗೆಮನಗೆ ಬಂದು ಕುಳಿತಕೂಂಡೆ. ಅಪ್ಪ ಬಡಿಸಿಟ್ಟ ಚಿಟಗನ ಅಕ್ಕಿ ಅನ್ನದಮೇಲೆ ಜೀರಿಗೆ ಮಾವಿನ ಹಣ್ಣಿನ ತಂಬುಳಿಯ ಘಮ ಮೂಗಿನ ಒಳಗಿಂದ ತಲೆಗೆ ಹೋಗಿ ಅಲ್ಲಿಂದ ಅದೇನೋ ವಿಚಾರ ಹೊಟ್ಟೆಗೆ ರವಾನೆ ಆಯಿತು. ಹೊಟ್ಟೆ ಮಾವಿನ ಹಣ್ಣಿನ ತಂಬುಳಿಯನ್ನ ಸವಿಯಲು ಸಿಧ್ಧವಾಗಿಬಿಟ್ಟಿತು. ಇನ್ನು ಹೊಟ್ಟೆಯಲ್ಲ ಜಾಗವಿಲ್ಲವೆಂದು ಬಟ್ಟಲು ಬಿಟ್ಟು ಎದ್ದು ಕೈ ತೊಳೆದುಕೊಂಡು ಬಂದು ಜಗುಲಿಯಲ್ಲಿ ಕುಳಿತುಕಳ್ಳುವ ಹೊತ್ತಿಗೆ ಕಿವಿಗೆ  ಬಿದ್ದದ್ದು ಅದೇ ಚಂಡೆ ಮತ್ತು ಮದ್ದಳೆಯ ದ್ವನಿ. ಗಾಳಿಯಲ್ಲಿ ತೇಲಿಬರುವ ಭಾಗವತಿಕೆಯ ಆಲಾಪನೆ.

ಛೇ...! ಮತ್ತೆ ವಿಶಯಾಂತರ ಆಯಿತು. ಮಿಸಾಳ ಬಾಜಿ ಕಥೆ ಹೇಳಲು ಹೋಗಿ ಕಥೆಯೇ ಮಿಸಾಳ್ ಬಾಜಿ ತರಹ ಕಲಸುಮೆಲೊಗರೆ ಆಯ್ತು ಅಂತೀರಾ..? ತೆಡೀರಿ ಮಹಾರಾಯ್ರೆ...! ಇಷ್ಟೆಲ್ಲಾ ಬಿಚ್ಚಿಕೊಳ್ಳುವ ಆಲೋಚನೆಯನ್ನ  ನಮೂದಿಸದೆ ಮುಂದೆ ಹೋದರೆ ತರವಲ್ಲ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಸಾಗರ ಮತ್ತೆ ಮಲೆನಾಡಿನ ಕಡೆಯ ಜನರಿಗೆ ಯಕ್ಷಗಾನದ ಹುಚ್ಚು ಸ್ವಲ್ಪ ಹೆಚ್ಚು. ಬೇಸಿಗೆಯಲ್ಲಿ ಅಲ್ಲಲ್ಲಿ ತೇರು, ಜಾತ್ರೆ, ಇವುಗಳಂತಹ ವಿಶೇಷ ಸಂದರ್ಭಗಳಲ್ಲಿ  ಯಕ್ಷಗಾನದ ಟೆಂಟು ಹಾಕಲ್ಪಡುತ್ತದೆ. ನಮ್ಮ ಊರಿನ ಹತ್ತಿರ ಗುಂಡಬಾಳ ಅನ್ನುವ ಪ್ರಕೄತಿ ಮಡಿಲಿನಲ್ಲಿರುವ ಸುಂದರ ಊರಿನಲ್ಲಿ ವರ್ಷಕ್ಕೆ ಆರುತಿಂಗಳು ಸತತವಾಗಿ ಒದೇ ಜಾಗದಲ್ಲಿ ದೇವರಿಗೆ ಹರಕೆಯ ರೂಪದಲ್ಲಿ  ಯಕ್ಷಗಾನ ನಡೆಯುತ್ತದೆ. ಹಾಗಾಗಿ ನನಗಂತೂ ರಜಾದಿನಗಳಲ್ಲಿ ಮನೋರಂಜನೆಗೆ ಪರದಾಡುವಂತಹ ಅವಶ್ಯಕತೆ ಬಂದಿದ್ದೇ ಇಲ್ಲ. ಬೇಸಿಗೆ ರಜೆಯ ಎರಡುತಿಂಗಳು ಗುಂಡಬಾಳದ ಗದ್ದೆ ಬೈಲಿನಲ್ಲಿ ಸರಾಗವಾಗಿ ಕಳೆದು ಹೋಗಿಬಿಡುತ್ತಿತ್ತು. ಆಮೆಲಾಮೇಲೆ ಊರು ಬಿಟ್ಟು ಪರ ಊರು ಸೇರಿದ ಮೇಲೆ ಯಾವಾಗಲಾದರೂ ಅಪರೂಪಕ್ಕೆ ಊರಿಗೆ ಹೋದಾಗ ಪುರುಸೊತ್ತಿದ್ದರೆ ಅಲ್ಲಿಗೆ ಹೋಗುವ ರೂಢಿ ಇತ್ತು. ಹಾಗೆ ಮೊನ್ನೆ ಊರಿಗೆ ಹೋದಾಗಲೂ ಸಹ ಚಂಡೆ ಮದ್ದಲೆಯ ನಾದ ಕರ್ಣ ಪಟಲವನ್ನ ತಾಗಿದ್ದೇ ತಡ. ಪಕ್ಕದ್ಮನೆಯ ವಿನಯನನ್ನು ಕೂಡಿಕೊಂಡು ಗುಂಡಬಾಳ ಕಡೆಗೆ ಹೊರಟು ಬಿಟ್ಟೆ. ದಾರಿಯ ಮಧ್ಯದಲ್ಲಾದ ಸಂಭಾಷಣೆಯನ್ನ ಈಗಾಗಲೇ ವಿವರಿಸಿದ್ದೇನೆ. ಮತ್ತೆ ಹೇಳಿದರೆ ಪುನರುಕ್ತ ದೋಷ ನನ್ನನ್ನ ಸುತ್ತಿಕೊಳ್ಳುತ್ತದೆ. ಹಾಗೆ ನಾವು ಒಂದರ್ಧಘಂಟೆಯ ನಂತರ ರಾತ್ರಿ ಹನ್ನೊಂದುವರೆ ಸುಮಾರಿಗೆ ಯಕ್ಷಗಾನ ನಡೆಯುವ ಬೈಲಿಗೆ ಬಂದಾಗಿತ್ತು. ಆಗತಾನೆ ಬಾಲ ಗೋಪಾಲ ಮತ್ತು ಸ್ತ್ರೀ ವೇಷದ ನಂತರ ಲವ ಕುಶ ಆಖ್ಯಾನವು ಆರಂಭವಾಗಿತ್ತು. ಅಲ್ಲಲ್ಲಿ ಕೆಲವು ಜನರು ಬೆರಳೆಣಿಕೆಯಲ್ಲಿ ಕುಳಿತಿದ್ದರು. ನಾನು ಸಣ್ಣವನಿರುವಾಗ ಮೇ ತಿಂಗಳಲ್ಲಿ ನಡೆಯುವ ಗುಂಡಬಾಳ ಯಕ್ಷಗಾನಕ್ಕೆ ಕಡಿಮೆ ಎಂದರೂ ಮುನ್ನೂರು ನಾಲ್ಕುನೂರರ ಆಸುಪಾಸು ಜನ ಸೇರುತ್ತಿದ್ದರು. ಆದರೆ ಯಾಕೋ ಇಂದಿನ ದಿನಗಳಲ್ಲಿ ಜನರೇ ಕಡಿಮೆ. ಟಿವಿ ಮಾಧ್ಯಮದ ನೇರ ದುಷ್ಪರಿಣಾಮ ಯಕ್ಷಗಾನದ ಮೇಲೆ ಆಗಿದೆ ಅಂದರೂ ತಪ್ಪಲ್ಲ. ಈಗ ನಡೆಸುವ ಯಕ್ಷಗಾನದ ಗುಣಮಟ್ಟವೂ ಪರಿಣಾಮವನ್ನ ಬೀರಿದೆ. ಒಂದು ಕಡೆ ಗಟ್ಟಿ ಮಾರ್ಗದರ್ಶಕರು ಮತ್ತು  ಹಿರಿಯ ಕಲಾವಿದರ ಕೊರತೆಯಾದರೆ, ಅದಕ್ಕೆ ಪೂರಕವಾಗಿ ದೇವಸ್ಥಾನದ ಟ್ರಸ್ಟಿಗಳು ಮೇಳಕ್ಕೆ ಕೊಡುವ ಹಣದ ಕೊರತೆಯೂ ಮೇಳವನ್ನ ಕಾಡುತ್ತಿರಬಹುದು. ಮತ್ತೆ ಈ ಜನರೇಶನ್ ನವರು ಯಕ್ಷಗಾನವನ್ನ ಒಂದು ಕಲೆಯನ್ನಾಗಿ ಸ್ವೀಕರಿಸದೆ ಕೇವಲ ವೃತ್ತಿಯನ್ನಾಗಿ ಪರಿಗಣಿಸಿದ್ದರ ಪರಿಣಾಮವೂ ಆಗಿರಬಹುದು. ಕಾರಣ ಬಹಳುಂಟು. ಅಂತೂ ಅಂದು ನಾವು ನೋಡುತ್ತಿರುವ ಯಕ್ಷಗಾನಕ್ಕಿಂತ ಇಂದಿನ ಯಕ್ಷಗಾನ ಸಪ್ಪೆ ಆದದ್ದಂತೂ ನಿಜ. ನಾವು ಅಲ್ಲಿಗೆ ಹೋದ ಸಂದರ್ಭದಲ್ಲಿ ಲವಕುಶ ಕಾಳಗ ಪ್ರಸಂಗವು ನಡೆಯುತ್ತಿತ್ತು. ಅಂದು ವಟುವನ್ನ ಮಾಡಿದ ಪಾತ್ರಧಾರಿಯೊಬ್ಬರು ಗುರುಕಲದ ಕಲಿಕಾಪದ್ದತಿಯನ್ನ ಅಧುನಿಕ ಯುಗದ ಸರ್ಕಾರಿ ಶಾಲೆಯ ಕಲಿಕೆಯಯಂತೆ ತಿಳಿದು ಮಾತಾನಾಡುತ್ತಲಿದ್ದರು. ಮಧ್ಯದಲ್ಲಿ ಪಾಟಿಚೀಲ, ಶಾಲೆ ಬಿಡುವ ವೇಳೆ, ಅದೂ ಇದು ನಮ್ಮ ಅಧುನಿಕ ಜಗತ್ತಿನ ವಿಧ್ಯಾಭ್ಯಾಸದ ಕಲಿಕೆಯ ಯತಾವತ್ ಅರ್ಥ್ ನಿರೂಪಣೆ ಅವರದ್ದಾಗಿತ್ತು. ನೋಡುತ್ತಿರುವ ಜನರಿಗೆ ವಾಲ್ಮೀಕಿಯ ಆಶ್ರಮವೂ ಒಂದೇ ನಮ್ಮ ಅಧುನಿಕ ಯುಗದ ಶಾಲೇಯೂ ಒಂದೆ ಅನ್ನವ ಭಾವನೆ ಅಲ್ಲಿ ನಿರ್ಮಾಣ ಮಾಡಿಬಿಟ್ಟಿದ್ದರು. ನನಗ್ಯಾಕೋ ಯಕ್ಷಗಾನವನ್ನ ಮುಂದೆ ನೋಡುವ ಮನಸ್ಸು ಬರಲಿಲ್ಲ.

ಅಷ್ಟೊತ್ತಿಗಾಗಲೇ ಶೆಟ್ಟರ ಅಂಗಡಿಯ ಬಿಸಿ ಬಿಸಿ ಕರಿದ ಬೋಂಡಾ ಮತ್ತು ಮಿಸಾಳ ಬಾಜಿ ವಾಸನೆ ನನ್ನ ಘ್ರಾಣವನ್ನ ಹೊಕ್ಕಿಯಾಗಿತ್ತು. ಸೀದಾ ಶಟ್ಟರ ಅಂಗಡಗೆ ಹೋಗಿ ಹಾಸಿದ ಬೆಂಚಿನ ಮೇಲೆ ಇಬ್ಬರೂ ಕುಳಿತುಕೊಂಡೆವು. ಸುಮಾರು ೨೦ ವರ್ಷಗಳಿಂದ ನೋಡುತ್ತಾ ಇದ್ದೇನೆ.  ಕೆಲವು ವರ್ಷಗಳಿಂದೀಚೆಗೆ ನಾನು ಅಲ್ಲಿಗೆ  ಹೋಗಿದ್ದು ಕಡಿಮೆ. ಮೊದಲು ಯಕ್ಷಗಾನಕ್ಕೆಂದು ಹೋದಾಗ ಶಟ್ಟರ ಅಂಗಡಿಯ ಮಿಸಾಳ್ ಬಾಜಿ ಸವಿಯದೇ ಬರುತ್ತಿರಲಿಲ್ಲ. ಅದರ ರುಚಿ ನನ್ನನ್ನ ಇನ್ನಿಲ್ಲದಂತೆ ಕಾಡಿದೆ. ನಾಲಿಗೆಯಲ್ಲಿ ಮಿಸಾಳ್ ಬಾಜಿ ಅಂದರೆ ಸಾಕು ಕಣ್ಣಮುಂದೆ ಬಂದು ನಿಲ್ಲುವದು ಯಕ್ಷಗಾನ ಮತ್ತು ಅದೇ ಶೆಟ್ಟರು. ಕಾಲಮಾನ ಬದಲಾದ ಕಾರಣ ಮಿಸಾಳ ಬಾಜಿಯ ರುಚಿಯೂ ಕಡಿಮೆ ಆಗಿರಬಹುದು ಮತ್ತು ಮಿಸಾಳ್ ಬಾಜಿಯ ಜಾಗದಲ್ಲಿ ಇನ್ನೇನೆನೋ ಹೊಸ ಹೊಸ ಬಗೆಯ  ತಿಂಡಿತಿನಿಸುಗಳ ಮೆನು ಇರಬಹುದೆಂದುಕೊಂಡಿದ್ದೆ. ಒಂದೇ ಜಾಗದ ಒಂದೇ ಉದ್ಯೋಗದ ಏಕತಾನತೆಯಿಂದ ಬೇಸತ್ತ ಶೆಟ್ಟರು ಅಂಗಡಿಯನ್ನೇ ಹಾಕಿಲ್ಲವೇನೋ ಅಂದುಕೊಂಡಿದ್ದೆ. ಆದರೆ ಶಟ್ಟರು ತಂಮ್ಮ ಎಂದಿನ ನಗುಮುಖದಿಂದ ಅದೇ ಮೂರು ಕಲ್ಲಿನ ಒಲೆಯಮೇಲೆ ಅದೇ ಹಳೆಯ ಆಲೆಮಾನ್ ದೊಡ್ಡ ಪಾತ್ರದಲ್ಲಿ ಉಗಿ ಉಗಿ ಕುದಿಯುವ ನೀರನ್ನ ತೆಗೆದು ಚಿಕ್ಕ ಪಾತ್ರೆಗೆ ಹಾಕಿ ಚಾಹಾ ಮಾಡುತ್ತಾ ಇದ್ದರು. ಖಾರದ ಕಡ್ಡಿ ತುಂಬಿಟ್ಟ ಗಾಜಿನ ಬರಣಿ ರಾತ್ರಿಯ ಲೈಟಿಗೆ ಹೊಳೆಯುತ್ತಲಿತ್ತು. ಮೊದಲಿಗೆ ಒಂದೊಂದು ಮಿಸಾಳ್ ಬಾಜಿ ಒಂದೊಂದು ಲೋಟ ಚಹವನ್ನ ಹೇಳಿದೆವು. ನನ್ನ ನಾಲಿಗೆಯು ಅಂದು ತಿಂನ್ನುತ್ತಿದ್ದ ಮಿಸಾಳ್ ಬಾಜಿಗೆ ಮತ್ತೆ ಇಂದು ತಿನ್ನುತ್ತಿರುವ ಮಿಸಾಳ್ ಬಾಜಿಯ ರುಚಿಯನ್ನ ತಾಳೆಹಾಕುತ್ತಲಿತ್ತು. ಅಂದಿನದಕ್ಕೆ ಇಂದಿನದಕ್ಕೆ ಯಾವುದೇ ವ್ಯತ್ಯಾಸವಿಲ್ಲ. ಆಹಾ....! ನಿಧಾನವಾಗಿ ಸವಿಯುತ್ತ ಮತ್ತೆರಡು ಪ್ಲೇಟ್ ಮಿಸಾಳ್ ಬಾಜಿಗೆ ಆರ್ಡರ್ ಕೊಟ್ಟೆ. ಗೆಳೆಯ ನಾಚುತ್ತಲೆ ಬೇಡ ಬೇಡ ಅಂದ. ಆದರೂ ನನಗಂತೂ ಕೆಲವು ವರ್ಷಗಳ ನಂತರ ಸಿಕ್ಕಿದ ಶೆಟ್ಟರಂಗಡಿ ಮಿಸಾಳ್ ಬಾಜಿಯನ್ನ ಒಂದೇ ಒಂದು ಮಾತ್ರ ತಿಂದು ಅತೃಪ್ತಿಯಿಂದ ಬಳಲುವದು ಬೇಡವಾಗಿತ್ತು. ಹಾಗೆ ನಗುಮುಖದಿಂದಲೇ ತಂದುಕೊಟ್ಟ ಮತ್ತೊಂದು ಮಿಸಾಳ್ ಬಾಜಿಯು ಕಾಲಿಯಾಗುವ ಹೊತ್ತಿಗೆ  ಕೈಗಡಿಯಾರದಲ್ಲಿನ ಚಿಕ್ಕ ಮುಳ್ಳು ಎರಡನ್ನ ದಾಟಿಯಾಗಿತ್ತು. ದೂರದಲ್ಲಿ ಲವಕುಶಕಾಳಗದ ಯುದ್ಧಸನ್ನಿವೇಶ ಬಂದಿರುವದರಿಂದ ಭಾಗವತರ ಏರುಧ್ವನಿ ತಾರಕಕ್ಕೆ ಮುಟ್ಟಿತ್ತು. ಚಂಡೆಯು ಬಿಡುವಿಲ್ಲದ ಶಬ್ಧತರಂಗದೊಂದಿಗೆ ರಾತ್ರಿಯಯನ್ನೇ ಸಿಳಿಬಿಡುತ್ತದೆಯೋ ಎನ್ನುವಂತೆ ಘರ್ಜಿಸುತ್ತಲಿತ್ತು. ಇಬ್ಬರಲ್ಲೂ ತೃಪ್ತಿಯ ಭಾವ ಮನೆಮಾಡಿತ್ತು. ದೋಸ್ತಾ ಹೋರಡೋಣ ಅಂದಿದ್ದಕ್ಕೆ ನಿದ್ರೆಗಣ್ಣಿನಲ್ಲಿ ಗೆಳೆಯ  ಹೂಂ...! ಹಾಕಿದ. ಮತ್ತೆ ನಾವು ದೊಡ್ಡತಲೆಯ ಬ್ಯಾಟರಿಯನ್ನ ಬೆಳಕುಮಾಡಿಕೊಂಡು ಮನೆಯಕಡೆ ಮುಖಮಾಡಿದೆವು. ದಾರಿಯಲ್ಲಿ  ನನ್ನ ಮನಸ್ಸು ಅಂದಿನಿಂದ ಇಂದಿನವರೆಗೆ ಒಂದೇ ರುಚಿಯನ್ನ ಕಾಯ್ದುಕೊಂಡು ಬಂದ ಶೆಟ್ಟರಂಗಡಿ ಮಿಸಾಳ್ ಬಾಜಿ ಮತ್ತು ಕಾಲಕ್ಕೆ ತಕ್ಕಂತೆ ಬದಲಾದ ಯಕ್ಷಗಾನದ ಅಭಿರುಚಿ ಇವುಗಳ ನಡುವೆ ಸಾಮ್ಯತೆಯನ್ನ ಹುಡುಕುತ್ತಲೇ ಇತ್ತು.

Saturday, June 18, 2011

ಕಾಲಚಕ್ರ



Thursday, June 9, 2011

ಅಂಕುರ

ಮೊದಲ ಮಳೆ ಬಿದ್ದಿದೆ
ಮಾನ್ಸೂನ್ ಆರಂಭವಾಗಿದೆಯಂತೆ
ಲೆಕ್ಕಾಚಾರದ ಮಾತಿನಲ್ಲಿ ಹೇಳುತ್ತಿದ್ದಾರೆ
ಹವಾಮಾನ ತಜ್ಞರು.

ಘಂ! ಎಂದು ಮಣ್ಣಿನ ವಾಸನೆ
ಗಾಳಿಗೆ ಹಾರಿದ ಬೀಜ ಮೊಳಕೆಯೊಡೆಯ ತೊಡಗಿದೆ
ಸತ್ತೇ ಹೋದ ಹುಲ್ಲು ಚಿಗುರತೊಡಗಿದೆ
ಬಾವಿಯ ನೀರು ಮೇಲೆ ಬರತೊಡಗಿದೆ

ಅಪ್ಪ ಮಡಿಸಿಟ್ಟ ಕೊಡೆಯನ್ನ ಬಿಚ್ಚಿ ನೋಡಿದ್ದಾನೆ
ಕಟ್ಟಿಗೆಮನೆಯಲ್ಲಿ ಸೋರುತ್ತಿದೆಯೋ ನೋಡಿ ಬಂದಿದ್ದಾನೆ
ನೀರ ಹರಿಯುವ ಕಾಲುವೆಯನ್ನ ಬಿಡಿಸಿಕೊಬೇಕೆಂದಿದ್ದಾನೆ
ಮಾಡಿನಿಂದ ಜಾರಿದ ನೀರು ಅಂಗಳಕ್ಕೆ ಬಿದ್ದು ರಾಡಿಯಾಗಿದೆ

ಪುಟ್ಟಕ್ಕನಿಗೆ ಈಗ ಬಾವಿಗೆ ಹೋಗಬೇಕಿಲ್ಲ
ಮಾಡಿನಿಂದ ಬಿದ್ದ ನೀರನ್ನೇ ಕೊಡದಲ್ಲಿ ಹಿಡಿದುಕೊಳ್ಳುತ್ತಾಳೆ
ಮಾಡಿಟ್ಟ ಉಪ್ಪಿನಕಾಯಿ ಹಪ್ಪಳವನ್ನ
ಬೆಚ್ಚಗೆ ಕಟ್ಟಿಡಬೇಕು ಇಲ್ಲ ಮಳೆಗೆ ಹಾಳಾದೀತು


ಬಿದ್ದ ಮಳೆ ಎಲ್ಲಾ ಕಾರ್ಯಗಳಿಗೆ ಆರಂಭ ಹಾಡಿದೆ
ಮನಸು ಲೆಕ್ಕಾಚಾರ ಹಾಕುತ್ತಿದೆ
ಕಳೆದದ್ದು ಎಷ್ಟನೇ ಮಳೆಗಾಲವೆಂದು
ಉಹೂಂ..!  ಲೆಕ್ಕ ಸಿಕ್ಕುತ್ತಿಲ್ಲ,
ಆದರೂ ಬಿದ್ದ ಮಳೆಗೆ ಅಂಕುರಗೊಳ್ಳುತ್ತದೆ ಹೊಸ ಆಸೆ