Sunday, May 1, 2011

ಒಂಟಿಮರವೇ ನಿನಗೆ ನೆರಳನೀಡುವ ಭ್ರಾಂತೇ............?



ಬಯಲತಾಣದಿ ನಿಂತ ಒಂಟಿವೃಕ್ಷಕೆ ಭ್ರಾಂತು
ಸುಡುವ ಸೂರ್ಯನ ಗೆಲಿದು ನೆರಳನೀಡುವೆನೆಂದು 
ಮನುಕುಲವು ಬೆಂದಿಹುದು ಬಿನ್ನಹದ ಬೇಗುದಿಲಿ 
ಸಹಜತೆಯ ಮೀರಿ ಕ್ರೌರ್ಯ ತುದಿಯ ಮುಟ್ಟಿಹುದು 

ಹೆಜ್ಜೆ ಹೆಜ್ಜೆಗು ಸುಡುವ ಲಾವಾರಸವು ಎದ್ದಿಹುದು 
ಪ್ರಾಮಾಣಿಕತೆಯು ಎಲ್ಲರಲಿ ಮಾಯವಾಗುತಲಿಹುದು
ಮೋಸ ಸ್ವಾರ್ಥವು ತುಂಬಿ ಬಡಜನರು ಬಳಲಿಹರು
ತಿಂದು ಜೀರ್ಣಿಸಿಕೊಂಡವರು ಮೆರೆಯುತ್ತಲಿಹರು 

ಆ ಧರ್ಮ ಈ ಧರ್ಮ ಮತಾಂಧತೆಯ ಬಿತ್ತರಿಸಿ
ನಮ್ಮ ನಮ್ಮಲ್ಲೆ ದ್ವೇಷದಾ ಜ್ವಾಲೆಯನು ಉರಿಸಿ
ಭಾಷೆ ಭಾವನೆ ಜಾತಿ ರಜ್ಯ ದೇಶದಾ ಗಡಿರೇಖೆ
ಹಿಂಸೆಯನು ಪ್ರಚೋದಿಸುವ  ಇದೆಲ್ಲವೂ ಬೇಕೆ

ಒಂಟಿಮರವೇ ನಿನಗೆ ನೆರಳನೀಡುವ  ಭ್ರಾಂತೇ
ಅಂತರದಿ  ಕುದಿಯುವ ಬೆಂಕಿಯ ತಣಿಸಬಹುದೇ
ಬಾಹ್ಯ ದೇಹಕೆ  ಕ್ಷಣಕಾಲ ತಂಪನೀಯಲು ಬಹುದು 
ಮನಸಿನೊಳಗಣ ಉರಿಯ ತಣಿಪ ಶಕ್ತಿ ನಿನಗಿಹುದೇ ?


(ಚಿತ್ರಕೃಪೆ ಸೌಮ್ಯಾ ಭಾಗ್ವತ್ )

10 comments:

  1. mast mast...
    ee photo kavanakke prachodane niDuva haagide...

    ReplyDelete
  2. MahabalaNNa ... raashi chanda aaydu baradaddu :)

    ReplyDelete
  3. ಅದ್ಭುತವಾದ ಸಾಲುಗಳಲ್ಲಿ ಉತ್ತಮ ವಿಚಾರಗಳು ತುಂಬಿಕೊಂಡಿವೆ ಮಹಾಬಲರವರೇ... Super!

    ReplyDelete
  4. Hi Geleya,

    Idanna bidi bidyaagi odidaga bhavagalu sooper agive. adare idanna onde kavana andukolluvudu kasta madyadallello vishayantaravadantide.... bt vicharayukta kavana

    Pravi

    ReplyDelete
  5. ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು

    ReplyDelete